‘ನಮ್ಮಲ್ಲಿ ಮೂಲ, ವಲಸೆ ಬಂದವರು ಎಂಬುದೇ ಇಲ್ಲ. ಒಮ್ಮೆ ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ಮೂಲ ಬಿಜೆಪಿಯವರು. ಎಚ್. ವಿಶ್ವನಾಥ್ಗೆ ಪಕ್ಷದ ಸಿದ್ದಾಂತ ತಿಳಿದಿದೆ. ಮಾಧ್ಯಮದವರು ಏನೇನೋ ಕೇಳಿದಾಗ ಏನೋ ಹೇಳಿರಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲ ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿ ಆದರೆ ಬೇಡ ಅನ್ನಲಿಕ್ಕಾಗುವುದಿಲ್ಲ. ಹಾಗೆ ನಮ್ಮ ಜಿಲ್ಲೆಯವರೇ ಉಸ್ತುವಾರಿ ಆದರೆ ಬೇಡ ಎನ್ನುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಕುರಿತು ರೇಣುಕಾಚಾರ್ಯ ನಿವಾಸದಲ್ಲಿ ನಡೆದ ಸಭೆಯ ಬಗ್ಗೆ ನನಗೆ ಗೊತ್ತೇ ಇಲ್ಲ. ಸಭೆಗೆ ನನ್ನನ್ನೂ ಕರೆದೂ ಇಲ್ಲ’ ಎಂದರು.