ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಎಲ್ಲದಕ್ಕೂ ಅಜ್ಜಯ್ಯನ ಬಳಿ ಓಡಿ ಹೋಗ್ತಾರೆ. ಈಗ ಆರೋಪ ಬಂದಿದೆ, ಹೋಗಪ್ಪ, ಅಜ್ಜಯ್ಯನ ಬಳಿ ಹೋಗಿ ಆಣೆ– ಪ್ರಮಾಣ ಮಾಡಪ್ಪ’ ಎಂದು ಏಕ ವಚನದಲ್ಲಿ ಕಾಲೆಳೆದರು.
ಶಿವಕುಮಾರ್ ಬೆಂಗಳೂರು ಅಭಿವೃದ್ಧಿ ಸಚಿವರಲ್ಲ. ಅವರು ಬೆಂಗಳೂರು ನಿರ್ನಾಮ ಸಚಿವ. ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ಡಿ.ಕೆ.ಶಿವಕುಮಾರ್ ಕಳಂಕ ತರುತ್ತಿದ್ದಾರೆ. ಕೇವಲ ಕೃಷಿಯಿಂದ ಅಪಾರ ಸಂಪತ್ತು ಗಳಿಸಿರುವ ಇವರು ಅದು ಹೇಗೆ ಎಂಬುದನ್ನು ಮುಖ್ಯಮಂತ್ರಿ ಸೇರಿ ಎಲ್ಲರಿಗೂ ಹೇಳಿಕೊಡಲಿ ಎಂದರು.
‘ಕಮಿಷನ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂಬ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನೀನು ರಾಜಕೀಯ ನಿವೃತ್ತಿನಾದ್ರೂ ಆಗು, ಕಾಂಗ್ರೆಸ್ ಅನ್ನು ನಿರ್ನಾಮನಾದ್ರೂ ಮಾಡು’ ಎಂದು ಲೇವಡಿ ಮಾಡಿದರು.
‘ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರವಾಗಿದೆ. ಲೋಕಸಭಾ ಚುನಾವಣೆಗಾಗಿ ಹಣ ದೋಚುವುದರಲ್ಲಿ ನಿರತವಾಗಿದೆ. ಸಿಎಂ, ಸೂಪರ್ ಸಿಎಂ ಮತ್ತು ಶ್ಯಾಡೋ ಸಿಎಂಗಳಿದ್ದಾರೆ. ವೈಎಸ್ಟಿ ಜತೆಗೆ ಸುರ್ಜೇವಾಲ ಬರ್ತಾರೆ ಟಾರ್ಗೆಟ್ ಕೊಡುತ್ತಾರೆ. ಅದಕ್ಕೆ ತಕ್ಕಂತೆ ಕಲೆಕ್ಷನ್ ಮಾಡ್ತಾರೆ. ಡಿ.ಕೆ.ಶಿ ಟ್ರ್ಯಾಕ್ ರೆಕಾರ್ಡ್ ಎಲ್ಲರಿಗೂ ಗೊತ್ತಿದೆ’ ಎಂದರು.