ಬುಧವಾರ ಮಾತನಾಡಿದ ಅವರು, ಖಾಸಗಿ ವಿಶ್ವವಿದ್ಯಾಲಯಗಳು ಮನಬಂದಂತೆ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಸೀಟುಗಳನ್ನು ನೀಡುತ್ತಿವೆ. ಇದು ನಿರುದ್ಯೋಗ ಸಮಸ್ಯೆಗೆ ದಾರಿಯಾಗಿದೆ. ಇದಕ್ಕೆ ಕಡಿವಾಣ ಅಗತ್ಯ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗೆ (ಎಐಸಿಟಿಇ) ಪತ್ರ ಬರೆದಿದ್ದೆ. ಕೆಲವು ಸಂಸ್ಥೆಗಳು ರಾಜ್ಯದ ನಿಯಂತ್ರಣದ ಅಡಿ ಬರುವ ಕಾರಣ ರಾಜ್ಯ ಸರ್ಕಾರವೇ ನಿಯಮ ರೂಪಿಸಬಹದು ಎಂದು ಸಲಹೆ ನೀಡಿದೆ. ಹಾಗಾಗಿ, ತಾಂತ್ರಿಕ ಶಿಕ್ಷಣ ನಿಯಮ ತಿದ್ದುಪಡಿ ತರಲು ಚರ್ಚೆ ನಡೆದಿದೆ ಎಂದರು.