ಬಂಡಾಯ ಅನ್ನೋದು ‘ಖರೀದಿ ಆದ್ರೆ’ ನಿಮ್ಮದು ಏನು..?
ಜೆಡಿಎಸ್ ಬಿಟ್ಟು ಕಾಂಗ್ರೆಸ್ಗೆ ಬಂದೀದ್ದೀರಲ್ಲಾ ನಿಮ್ಮದು ಖರಿದಿಯೇ, ಬಾಲಕೃಷ್ಣ, ಜಮೀರ್, ಅಖಂಡ ಶ್ರೀನಿವಾಸ ಮೂರ್ತಿ, ರಮೇಶ್ ಬಂಡಿಸಿದ್ದೇಗೌಡ ಇವರೆಲ್ಲಾ ನಿಮ್ಮ ಜೊತೆ ಬಂದಿದ್ದಾರೆ. ಜೆಡಿಎಸ್ ಅಭ್ಯರ್ಥಿ ವಿರುದ್ದ ಕ್ರಾಸ್ ಓಟ್ ಮಾಡಿಸಿದ್ರಿ ಅದು ಮನೆಮುರುಕತನ ಅಲ್ವಾ..? ನಿಮ್ಮ ಪಾರ್ಟಿಗೆ ಮರ್ಯಾದೆ ಇದ್ದರೆ ಬಂಡಾಯ ಎದ್ದಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ. ಯಾವ ಆಮೀಷ ಒಡ್ಡಿ ಅತೃಪ್ತರನ್ನ ಮತ್ತೆ ಕರೆದುಕೊಂಡು ಬಂದ್ರಿ..? ನಿಮಗೆ ಮರ್ಯಾದೆ ಇದ್ರೆ ಬಂಡಾಯ ಎದ್ದೋರನ್ನ ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಸವಾಲು ಹಾಕಿದರು.
‘ನಾವು ಹರಿಯಾಣದ ಗುರುಗ್ರಾಮಕ್ಕೆ ಬರ ಅಧ್ಯಯನಕ್ಕಾಗಿ ಹೋಗಲಿಲ್ಲ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಗೆ ಹೋಗಿದ್ದೇವು. ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆಸಲಾಯಿತು’ ಎಂದು ಹೇಳಿದರು.