ಮತದಾನದ ಹಕ್ಕು ಚಲಾಯಿಸಿದರೆ ದೇಶದಲ್ಲಿ ನಮ್ಮ ಇರುವಿಕೆಗೆ ಮಹತ್ವ ಬರುತ್ತದೆ. ಹಾಗಾಗಿ, ಸದೃಢ ಸರ್ಕಾರ ರಚನೆಗೆ ನಿಮ್ಮ ಕೊಡುಗೆ ನೀಡಿ. ನಮ್ಮ ಒಂದು ಮತಕ್ಕೆ ದೇಶದ ಭವಿಷ್ಯವನ್ನು ಹಾಳು ಮಾಡುವ ಅಥವಾ ಉದ್ಧಾರ ಮಾಡುವ ಸಾಮರ್ಥ್ಯವಿದೆ. ಉತ್ತಮ ಅಭ್ಯರ್ಥಿಗೆ ಮತ ಹಾಕಿದರೆ ದೇಶ ಕಟ್ಟುವ ಕೆಲಸವಾಗುತ್ತದೆ. ವಿವೇಚನೆಯಿಲ್ಲದೇ ಮತ ಚಲಾಯಿಸಬೇಡಿ.