ಸಚಿವ ಸ್ಥಾನದ ಆಕಾಂಕ್ಷಿಗಳಾದ ಎಂ.ಟಿ.ಬಿ. ನಾಗರಾಜ್, ಪಿ.ಟಿ. ಪರಮೇಶ್ವರ ನಾಯ್ಕ, ಬಿ.ಸಿ. ಪಾಟೀಲ, ಡಾ. ಸುಧಾಕರ್, ಟಿ. ರಘುಮೂರ್ತಿ, ಆರ್. ರೋಷನ್ ಬೇಗ್, ಎಂ. ಕೃಷ್ಣಪ್ಪ ಸೇರಿದಂತೆ 16 ಶಾಸಕರು ಗುಂಪಿನಲ್ಲಿದ್ದಾರೆ. ಮುಂಚೂಣಿಯಲ್ಲಿರುವ ಕೆಲವರು ಬೆಂಗಳೂರಿನಲ್ಲಿ ಶುಕ್ರವಾರ ಸಭೆ ಸೇರಿ ಈ ಒತ್ತಡ ತಂತ್ರ ಹೆಣೆಯುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.