‘ಜಾಧವ್ ಅವರು ನೀಡಿರುವ ರಾಜೀನಾಮೆಯು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 202ರ ಪ್ರಕಾರ ನಿಗದಿತ ನಮೂನೆಯಲ್ಲಿ ಸಲ್ಲಿಸಿದ ಕಾರಣ ಮತ್ತು ನಾನು ಸೂಚಿಸಿದಂತೆ ಅವರು ಸಮಜಾಯಿಷಿಗಳನ್ನು ಪೂರ್ಣ ಪ್ರಮಾಣ ಪತ್ರದೊಂದಿಗೆ ಸಲ್ಲಿಸಿರುವುದರಿಂದ ಇದು ಸ್ವ–ಇಚ್ಛೆಯಿಂದ ಯಾವ ಒತ್ತಡಕ್ಕೂ ಮಣಿಯದೆ ಯಾವ ಆಮಿಷಗಳಿಗೂ ಒಳಗಾಗದೆ ತೆಗೆದುಕೊಂಡಂತಹ ನಿಲುವು ಎಂದು ಮನವರಿಕೆಯಾಗಿದೆ. ಸಂವಿಧಾನದ ಅನುಚ್ಚೇದ 190(3) ಯಲ್ಲಿ ಸಭಾಧ್ಯಕ್ಷರು ಇಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮವನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದು, ಅನುಚ್ಚೇ 190(3)ಬಿ ಯ ಪರಂತುಕದಲ್ಲಿ ಸೂಚಿಸಿದ ಹಾಗೆ ಕ್ರಮವನ್ನು ಜರುಗಿಸಿ ನಂತರ ಉಮೇಶ್ ಜಾಧವ್ ಅವರ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ರಾಜ್ಯ ವಿಧಾನಸಭೆ ಸದಸ್ಯತ್ವಕ್ಕೆ ನೀಡಿರುವ ರಾಜೀನಾಮೆಯನ್ನು ನನ್ನ ಸ್ವಂತ ನ್ಯಾಯಿಕ ಪ್ರಜ್ಞೆಯ ಮೇರೆಗೆ ಅಂಗೀಕರಿಸಲಾಗಿದೆ’ ಎಂದು ರಮೇಶ್ಕುಮಾರ್ ಅವರು ವಿವರಣೆ ನೀಡಿದ್ದಾರೆ.