ಈ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪಗೌಡ 'ಡ್ರೋನ್ಸಮೀಕ್ಷೆ ಒಂದು ವೈಜ್ಞಾನಿಕ ವಿಧಾನವಾಗಿದ್ದು, ಕಡಿಮೆ ಅವಧಿಯಲ್ಲಿ ಪ್ರದೇಶವಾರು ಎಲ್ಲ ಮಾಹಿತಿಗಳನ್ನು ನಿಖರವಾಗಿ ತಿಳಿಯಲು ಸಾಧ್ಯ. ಅಲ್ಲದೆ ಬೆಳೆ ಒಣಗಿ ಹತ್ತು ದಿನಗಳ ನಂತರ ಮಳೆ ಬಂದರೆ ಹಸಿರು ಚಿಗಿತು ಬರವೇ ಇಲ್ಲ ಎಂಬ ಪರಿಸ್ಥಿತಿ ಕೆಲವೊಮ್ಮೆ ಉಂಟಾಗುತ್ತದೆ. ಆದ್ದರಿಂದ ಅಂಕಿ, ಅಂಶ, ಸಮಯ, ಪ್ರದೇಶ ಸೇರಿದಂತೆ ಚಿತ್ರೀಕರಣ ಮಾಡುವುದರಿಂದ ಹಾನಿಯ ಅಂದಾಜು ದೊರೆಯುತ್ತದೆ' ಎನ್ನುತ್ತಾರೆ.