ಹನುಮ ಜಯಂತಿ ಸಂಬಂಧ ಸಿದ್ದರಾಮಯ್ಯ ಅವರ ಮಾತಿಗೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಅವರು, ‘ನಂಬಿಕೆಗಳ ಮೇಲೆ ಜಗತ್ತು ನಡೆಯುತ್ತಿದೆ. ಅಪ್ಪ ಎಂಬುದಕ್ಕೆ ಸಾಕ್ಷಿ ಏನು ಎಂದು ಅಮ್ಮನನ್ನು ಯಾರೂ ಕೇಳಲ್ಲ. ಸಾಕ್ಷಿ ಕೇಳುವ ಮನಃಸ್ಥಿತಿ ಇರುವವರು ಕೆಲವರು ಇರುತ್ತಾರೆ, ಅಂಥವರಲ್ಲಿ ಸಿದ್ದರಾಮಯ್ಯ ಒಬ್ಬರಾಗಿದ್ದಾರೆ’ ಎಂದರು.