ಬೆಂಗಳೂರು: ಹಿಂದುಳಿದ ವರ್ಗಗಳ ಸಮುದಾಯ ಭವನ ಮತ್ತು ವಿದ್ಯಾರ್ಥಿ ನೆಲೆಗಳ ಅಭಿವೃದ್ಧಿಗೆ ಒಂದು ವಾರದಲ್ಲಿ ಹಣ ಬಿಡುಗಡೆ ಮಾಡದಿದ್ದರೆ ಇಲಾಖೆ ವಿರುದ್ಧ ಧರಣಿ ನಡೆಸುವುದಾಗಿ ಬಿಜೆಪಿಯ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಆರ್ಥಿಕ ಇಲಾಖೆ ಮೂರು ತಿಂಗಳ ಹಿಂದೆಯೇ ಕಡತ ಸಂಖ್ಯೆ 660ರ ಮೂಲಕ ಅನುಮೋದನೆ ನೀಡಿದ್ದರೂ ಹಿಂದುಳಿ ವರ್ಗಗಳ ಇಲಾಖೆ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದೇ ಸತಾಯಿಸುತ್ತಿದೆ. ಕೂಡಲೇ ಹಣ ಬಿಡುಗಡೆ ಮಾಡದಿದ್ದರೆ ಇಲಾಖೆ ಮುಂದೆ ಧರಣಿ ನಡೆಸುವುದೊಂದೇ ದಾರಿ ಎಂದು ‘ಎಕ್ಸ್’ ಮೂಲಕ ತಿಳಿಸಿದ್ದಾರೆ.