ವಿಧಾನಪರಿಷತ್ನಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಮನೆಗಳು ಮತ್ತು ಶಾಲೆಗಳ ಬಳಿಯೇ ವಾಹನಗಳಿಗೆ ಲಾರಿಗಳಿಂದ ನೇರವಾಗಿ ಡೀಸೆಲ್ ಭರ್ತಿ ಮಾಡಲಾಗುತ್ತಿದೆ. ಇದು ಅಸುರಕ್ಷಿತವೂ ಹೌದು. ಆಹಾರ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿ ಮಹಾನ್ ಭ್ರಷ್ಟ ಅಧಿಕಾರಿಗಳಿದ್ದಾರೆ. ಇವರಿಂದಾಗಿ ಅಕ್ರಮಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.