ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ‘ಅರ್ಜುನ’ನನ್ನು ಸಕಲೇಶಪುರದ ದಬ್ಬಳಿಕಟ್ಟೆ ಅರಣ್ಯದಲ್ಲಿ ಸೋ ಮವಾರ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಗೆ ಬಳಸಲಾಗಿತ್ತು. ಆರು ಸಾಕಾನೆಗಳಿದ್ದರೂ ಕಾಡಾನೆ ದಾಳಿ ಮಾಡಿತ್ತು. ಉಳಿದ ಆನೆಗಳು ಹಿಮ್ಮೆಟ್ಟಿದ್ದರೆ ಅರ್ಜುನ ಮಾತ್ರ ಕಾಡಾನೆ ಜೊತೆ ಕಾದಾಡಿದ್ದ. ಗುಂಪಿನಿಂದ ಕಾಡಾನೆಯನ್ನು ಬೇರ್ಪಡಿಸಿ ಅರಿವಳಿಕೆ ಚುಚ್ಚುಮದ್ದು ನೀಡಲು ಮುಂದಾಗುತ್ತಿದ್ದಾಗ ಅರ್ಜುನನ ಮೇಲೆ ಕಾಡಾನೆ ದಾಳಿ ನಡೆಸಿದೆ. ದಂತದಿಂದ ಅರ್ಜುನನ ಹೊಟ್ಟೆಗೆ ತಿವಿದಿದೆ. ಪರಿಣಾಮ ಅರ್ಜುನ ಸಾವನ್ನಪ್ಪಿದೆ.