‘ಬೆಳೆ, ಮನೆ, ಕಟ್ಟಡ, ರಸ್ತೆ ಹಾಳಾಗಿವೆ. ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಬೆಟ್ಟಗಳೇ ಕುಸಿದಿವೆ. ಅಲ್ಲದೇ, ಇನ್ನೂ ಮಳೆ ಬೀಳುವ ಮುನ್ಸೂಚನೆ ಇದೆ. ಹೀಗಾಗಿ, ತರಾತುರಿಯಲ್ಲಿ ನಷ್ಟದ ಅಂದಾಜು ಮಾಡಿ ಈಗೊಂದು ವರದಿ ಸಲ್ಲಿಸಿ ಮತ್ತೊಮ್ಮೆ ಇನ್ನೊಂದು ವರದಿ ಸಲ್ಲಿಸಲು ಸಾಧ್ಯವಿಲ್ಲ. ಒಟ್ಟಾರೆ ಸಮಗ್ರ ವರದಿಯನ್ನು ಸಲ್ಲಿಸಲಾಗುವುದು’ ಎಂದು ಅವರು ಹೇಳಿದರು.