ಅರಣ್ಯ ಅತಿಕ್ರಮಣದ ಕುರಿತು ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಮೂರ್ತಿ ಸುಧೀರ್ ಅಗರವಾಲ್ ಹಾಗೂ ಎ.ಸೆಂಥಿಲ್ ವೇಲ್ ಅವರ ದ್ವಿಸದಸ್ಯ ಪೀಠ, ‘ಅರಣ್ಯ ಒತ್ತುವರಿ ಪತ್ತೆ ಹಚ್ಚಲು ಸರ್ಕಾರ ಸರ್ವೆ ನಡೆಸಿದರೆ ಸಾಲದು. ಒತ್ತುವರಿ ತೆರವುಗೊಳಿಸಿ ಮೌನವಾಗಿರುವುದು ಸರಿಯಲ್ಲ. ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಹಾನಿ ಬಗ್ಗೆ ಪರಿಹಾರಾತ್ಮಕ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕು’ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.