ಸ್ನಾನಘಟ್ಟಗಳ ಬಳಿ ಶಾಂಪೂ ನಿಷೇಧಿಸಲು ಆದೇಶ ಹೊರಡಿಸಿದ್ದನ್ನು ನೋಡಿ ಅರಣ್ಯ ಸಚಿವರಿಗೆ ಜಲಮೂಲಗಳ ರಕ್ಷಣೆ ಬಗ್ಗೆ ಇರುವ ಕಾಳಜಿ ಕುರಿತು ಖುಷಿಯಾಗಿತ್ತು. ಆದರೆ, ಶರಾವತಿ ನದಿ ಮೇಲೆ ಬರೆ ಎಳೆಯಲಿರುವ ಕಾನೂನುಬಾಹಿರ ಭೂಗರ್ಭ ವಿದ್ಯುತ್ ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿರುವುದು, ಅರಣ್ಯ ರಕ್ಷಣೆಯಲ್ಲಿ ತೊಡಗಿರುವ ವನವಾಸಿಗಳನ್ನು ರಾಜ್ಯದ ವಿವಿಧೆಡೆ ಕಾನೂನುಬಾಹಿರವಾಗಿ ಸ್ಥಳಾಂತರಿಸುವ ಆತುರ ನೋಡಿ ನಿರೀಕ್ಷೆ ಹುಸಿಯಾಗಿದೆ
ರಾಮಪ್ರಸಾದ್, ಪರಿಸರ ಕಾರ್ಯಕರ್ತ
ಶರಾವತಿ ಯೋಜನೆಯ ವಿಸ್ತೃತ ಯೋಜನಾ ವರದಿ ಬಹಿರಂಗಪಡಿಸದಿರುವುದು ಕಾನೂನುಬಾಹಿರ. ಕೇಂದ್ರ ಪರಿಸರ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಉಲ್ಲಂಘಿಸಿದೆ