ಮೈಸೂರು– ಮಂಗಳೂರು ರಸ್ತೆಯ ಬೈಚನಹಳ್ಳಿ ಗ್ರಾಮದಲ್ಲಿರುವ ತಾವರೆಕೆರೆ ಆವರಣ ಮತ್ತು ಸುತ್ತಮುತ್ತ ಅಕ್ರಮ ಕಟ್ಟಡಗಳು ತಲೆ ಎತ್ತಿವೆ. ಕೆರೆ ಪ್ರದೇಶ ಅತಿಕ್ರಮವಾಗಿರುವುದು ರಾಜಕಾಲುವೆಯಿಂದ ಕಾವೇರಿ ನದಿಗೆ ನೀರು ಹರಿದು ಹೋಗುವುದಕ್ಕೂ ಅಡ್ಡಿಯಾಗಿದೆ. ಮಳೆಗಾಲದಲ್ಲಿ ನೀರು ರಸ್ತೆ ಹರಿದು ಬರುವಂತಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.