ಹಾಗಲವಾಡಿ: ‘ನಾನು ಜೆಡಿಎಸ್ ಬಿಟ್ಟಿರುವುದಾಗಿ ಎಂದೂ, ಎಲ್ಲೂ ಹೇಳಿಲ್ಲ. ಇನ್ನೊಬ್ಬರನ್ನು ತಂದು ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದವರನ್ನೇ ಕೇಳಬೇಕು. ಕಾರ್ಯಕರ್ತರಲ್ಲಿ ಗೊಂದಲಬೇಡ’ ಎಂದು ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಹೇಳಿದ್ದಾರೆ.
‘ಗುಬ್ಬಿ ಕ್ಷೇತ್ರದಲ್ಲಿ ಹಾಲಿ ಶಾಸಕರಿದ್ದರೂ ಇನ್ನೊಬ್ಬರನ್ನು ಅಭ್ಯರ್ಥಿ ಎಂದು ಘೋಷಿಸಿ ಗೊಂದಲ ಸೃಷ್ಟಿಸಿದ ಮುಖಂಡರೇ ನನಗೆ ಕರೆಮಾಡಿ ಮಾತಾಡಲು ಕರೆಯುತ್ತಿದ್ದಾರೆ. ಕುಳಿತು ಮಾತನಾಡಿದರೆ ತಿಳಿಯುತ್ತದೆ’ ಎಂದರು.