ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್. ಪರವಾಗಿ ಶುಕ್ರವಾರ ಐಡಿಯಲ್ ಹೋಮ್ಸ್ನಲ್ಲಿ ಒಕ್ಕಲಿಗ ಸಮುದಾಯದ ಸಂಘಟನೆಗಳ ಮುಖಂಡರ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ‘ಕೆಲವರು ಬಂಡೆಯನ್ನು ಡೈನಮೈಟ್ ಇಟ್ಟು ಪುಡಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಬಂಡೆ ಪುಡಿಯಾಗಿ ಜಲ್ಲಿ ಕಲ್ಲಾದರೆ ಮನೆ ಕಟ್ಟಲು ಬಳಸಬಹುದು. ದೇವರ ಗುಡಿಯ ಮುಂದೆ ಗರುಡಗಂಭವಾಗಿ, ವಿಗ್ರಹವಾಗಿ, ಚಪ್ಪಡಿಯಾಗಿಯೂ ಬಳಸಬಹುದು’ ಎಂದರು.