‘ಕಳೆದ ಜುಲೈನಲ್ಲಿ ನನ್ನ ಕಚೇರಿಯಲ್ಲಿ ನಡೆಯುವ ಜನತಾ ದರ್ಶನಕ್ಕೆ ಬಂದಿದ್ದರು. ಜನತಾದರ್ಶನಕ್ಕೆ ಏಕೆ ಬಂದಿರುವುದಾಗಿ ಪ್ರಶ್ನಿಸಿದೆ. ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿದ್ದರು. ಕೆಲವು ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದು, ಹಣವನ್ನು ಹಿಂದಕ್ಕೆ ಪಡೆಯಲು ನೆರವು ನೀಡಬೇಕು ಎಂದು ಮನವಿ ಮಾಡಿದ್ದರು. ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಆ ಕಂಪನಿಗಳವರಿಗೆ ದೂರವಾಣಿ ಕರೆ ಮಾಡಿ, ಪ್ರದೀಪ್ ಸಮಸ್ಯೆ ಎದುರಿಸುತ್ತಿರುವುದರಿಂದ ಹಣ ಹಿಂದಕ್ಕೆ ಕೊಡುವಂತೆ ತಿಳಿಸಿದ್ದೆ’ ಎಂದರು.