ಅವರು ಇತ್ತೀಚೆಗೆರಾಜಮಾತೆ ಪ್ರಮೋದಾ ದೇವಿ ಅವರ ಪಾದಕ್ಕೆ ನಮಸ್ಕಾರ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಪ್ನಾ ಬುಕ್ ಹೌಸ್ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪುಸ್ತಕ ಜಾತ್ರೆಗೆ ಚಾಲನೆ ನೀಡಿ, ಘಟನೆ ಬಗ್ಗೆ ಪರೋಕ್ಷವಾಗಿ ಸ್ಪಷ್ಟನೆ ನೀಡಿದರು. ‘ಮೈಸೂರು ಮಹಾರಾಜರು ಕಟ್ಟಿದ ಕನ್ನಡ ನಾಡಿನಲ್ಲಿ ಇಂದು ಅನೇಕ ವಿದ್ವಾಂಸರು, ಬರಹಗಾರರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಅನೇಕ ಸಂಸ್ಥೆಗಳು ಬೆಳೆದಿವೆ.ಮಹಾರಾಜರ ಕೊಡುಗೆಯನ್ನು ನಾವು ಮರೆಯಬಾರದು. ನಾವೆಲ್ಲ ಅವರಿಗೆ ಕೃತಜ್ಞತೆ ಹೊಂದಿರಬೇಕು. ಅವರ ಕುಟುಂಬದವರು ಯಾವುದೇ ವಯಸ್ಸಿನವರಿದ್ದರೂ ಸರಿ, ಅವರಿಗೆ ನಮಸ್ಕರಿಸುತ್ತೇನೆ’ ಎಂದು ಹೇಳಿದರು.