‘ಭಾರತ ಧರ್ಮಾಧಾರಿತ ರಾಷ್ಟ್ರವಲ್ಲ. ಇದು ಆಧ್ಯಾತ್ಮದ ನೆಲೆಬೀಡು. ಈ ದೇಶ ಸಂವಿಧಾನದ ಮೇಲೆ ನಡೆಯುತ್ತಿದೆ. ಭಗವಾನ್ ಮಹಾವೀರ, ಮಹಾತ್ಮ ಗಾಂಧೀಜಿ, ಬಸವೇಶ್ವರರು ಶಾಂತಿ, ಸಹಬಾಳ್ವೆಯ ತತ್ವಗಳನ್ನು ಕೊಟ್ಟು ಹೋಗಿದ್ದಾರೆ. ಇಂತಹ ನಾಡಿನಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ’ ಎಂದರು.
ವೈರಸ್ಗೆ ಮದ್ದು: ‘ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಸೋಂಕು ತಗುಲಿದವರನ್ನು ಗುಣಪಡಿಸಲು ಆಯುರ್ವೇದ ಔಷಧ ತಯಾರಿಸುವ ಕೆಲಸ ಆರಂಭಿಸಲಾಗಿದೆ. ಈ ಹಿಂದೆ ಡೆಂಗಿ, ಚಿಕುನ್ಗುನ್ಯಾಕ್ಕೂ ಪತಂಜಲಿಯಿಂದ ಔಷಧ ತಯಾರಿಸಿ, ಅನೇಕ ಜನರನ್ನು ಬದುಕುಳಿಸಿದ್ದೇವೆ’ ಎಂದು ಮಾಹಿತಿ ನೀಡಿದರು.