ಆಯ್ಕೆಯಾದವರಿಗೆ ನೇಮಕಾತಿ ಆದೇಶ ವಿತರಿಸಿ ಮಾತನಾಡಿದ ಕಾರ
ಜೋಳ, ‘ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371–ಜೆ ತಿದ್ದುಪಡಿ ಜಾರಿಯಾದ ಬಳಿಕ ಆ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಮೀಸಲಾತಿ ದೊರಕುತ್ತಿದೆ. ಆರಂಭದ ವರ್ಷ
ಗಳಲ್ಲಿ ಇತರ ಭಾಗದ ಸರ್ಕಾರಿ ನೌಕರರೇ ಆ ಸೌಲಭ್ಯ ದುರ್ಬಳಕೆ ಮಾಡಿಕೊಂಡಿದ್ದರು. ಈಗ ಅದಕ್ಕೆ ಕಡಿವಾಣ ಹಾಕಿದ್ದೇವೆ. ಕಲ್ಯಾಣ ಕರ್ನಾಟಕದ ಹುದ್ದೆಗಳಿಗೆ ನೇಮಕಗೊಂಡವರು ಇತರೆಡೆ ಹುದ್ದೆ ಬಯಸಬೇಡಿ’ ಎಂದರು.