ಈ ಪ್ರಶಸ್ತಿಯು ತಲಾ ₹ 5 ಸಾವಿರ ನಗದು ಒಳಗೊಂಡಿದೆ. ಕೋವಿಡ್ ಕಾರಣ ಕಳೆದ ಎರಡು ವರ್ಷ ಈ ಪ್ರಶಸ್ತಿ ನೀಡಿರಲಿಲ್ಲ. ಚಿತ್ರದುರ್ಗದ ಲಕ್ಷ್ಮಣ ತೆಲಗಾವಿ ಅವರು ಇತಿಹಾಸ ತಜ್ಞರು ಹಾಗೂ ದೇವರಕೊಂಡಾ ರೆಡ್ಡಿ ಕನ್ನಡ ವಿದ್ವಾಂಸರು. ಇವರಿಬ್ಬರೂ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು.ಎಚ್.ಎಸ್. ಗೋಪಾಲರಾವ್ ಅವರು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ತಿಳಿಸಿದ್ದಾರೆ.