ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ವಿರೋಧ ಪಕ್ಷವಾಗಿ ಕಾಂಗ್ರೆಸ್ ತನ್ನ ಕೆಲಸ ಮಾಡಿದೆ. ನಮ್ಮ ಸಲಹೆಗೆ ‘ನೋಡುತ್ತೇವೆ, ಮಾಡುತ್ತೇವೆ’ ಎಂದು ಸರ್ಕಾರ ಹೇಳುತ್ತದೆ. ಹೀಗಾಗಿ, ಬೆಳಗಾವಿ ಅಧಿವೇಶನ ವಿಫಲ ಎನ್ನಬೇಕು’ ಎಂದರು. ‘ಕಿತ್ತೂರು ಕರ್ನಾಟಕ ವಿಷಯದಲ್ಲೂ ಹಾಗೇ ಆಗಿದೆ. ಘೋಷಣೆ ಮಾಡಿದರು, ದುಡ್ಡು ಕೊಡಬೇಕಲ್ಲ’ ಎಂದು ಪ್ರಶ್ನಿಸಿದರು.