<p><strong>ಬೆಂಗಳೂರು</strong>: ‘ವಿಚಾರಣೆ ವೇಳೆ ನಿಮ್ಮ ಮೇಲ್ಮನವಿ ಏನಾದರೂ ಕ್ಷುಲ್ಲಕ ಎಂದು ಕಂಡು ಬಂದಲ್ಲಿ ₹1 ಲಕ್ಷ ದಂಡ ವಿಧಿಸಲಾಗುವುದು’ ಎಂದು ಹೈಕೋರ್ಟ್ ಮೌಖಿಕವಾಗಿ ಎಚ್ಚರಿಸಿದ ಬೆನ್ನಲ್ಲೇ, ಮಹೇಶ ಜೋಶಿ ಅವರು ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ತಮ್ಮ ಮೇಲ್ಮನವಿಯನ್ನು ಹಿಂಪಡೆದಿದ್ದಾರೆ. ಇದರಿಂದಾಗಿ ಮಾಹಿತಿ ನಿರಾಕರಣೆ ಆರೋಪಕ್ಕೆ ಸಂಬಂಧಿಸಿದಂತೆ ₹25 ಸಾವಿರ ದಂಡ ಪಾವತಿಸುವ ಅನಿವಾರ್ಯ ಅವರಿಗೆ ಎದುರಾಗಿದೆ.</p>.<p>‘ಬೆಂಗಳೂರು ದೂರದರ್ಶನ’ಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿ ಕೋರಿ ಬಿ.ಅಶೋಕ್ ಮತ್ತು ಎನ್.ಕೆ.ಮೋಹನ್ ರಾಂ 2008-09ರ ಅವಧಿಯಲ್ಲಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಅಂದಿನ ದೂರದರ್ಶನ ಮಾಹಿತಿ ಅಧಿಕಾರಿ ಹಾಗೂ ಕೇಂದ್ರದ ನಿರ್ದೇಶಕರಾಗಿದ್ದ ಮಹೇಶ ಜೋಶಿ ಮಾಹಿತಿ ನೀಡಲು ನಿರಾಕರಿಸಿದ್ದರಲ್ಲದೆ, ಮಾಹಿತಿ ಒದಗಿಸಬೇಕಾದರೆ ₹50,160 ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು.</p>.<p>ಇದನ್ನು ಪ್ರಶ್ನಿಸಲಾಗಿದ್ದ ಅರ್ಜಿದಾರರ ಮನವಿಯನ್ನು ಕೇಂದ್ರ ಮಾಹಿತಿ ಹಕ್ಕು ಆಯೋಗ ಪುರಸ್ಕರಿಸಿತ್ತು. ‘ಮಾಹಿತಿ ನೀಡದ ಮಹೇಶ ಜೋಶಿ ಕ್ರಮ ಸರಿಯಲ್ಲ ಹಾಗೂ ಮಾಹಿತಿ ನಿರಾಕರಿಸುವ ಮೂಲಕ ಅವರು ದಂಡಕ್ಕೆ ಅರ್ಹರು’ ಎಂದು ತೀರ್ಮಾನಿಸಿ ₹25 ಸಾವಿರ ದಂಡ ವಿಧಿಸಿ, ಅದನ್ನು ಅವರ ಸಂಬಳದಿಂದಲೇ ವಸೂಲು ಮಾಡುವಂತೆ ಆದೇಶಿಸಿತ್ತು.</p>.<p>ಈ ಆದೇಶ ಪ್ರಶ್ನಿಸಿ ಜೋಶಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ, ಜೋಶಿ ಮನವಿಯನ್ನು ವಜಾಗೊಳಿಸಿತ್ತು. ‘ಜೋಶಿಯವರ ಧೋರಣೆ ಒಬ್ಬ ಸರ್ಕಾರಿ ಅಧಿಕಾರಿಯ ಗುಣವಲ್ಲ. ಈ ಹಿನ್ನೆಲೆಯಲ್ಲಿ ಆಯೋಗ ನೀಡಿರುವ ಆದೇಶ ಸಮಂಜಸವಾಗಿಯೇ ಇದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಆಯೋಗ ವಿಧಿಸಿದ್ದ ₹25 ಸಾವಿರ ದಂಡದ ಆದೇಶವನ್ನು ಎತ್ತಿ ಹಿಡಿದಿತ್ತು.</p>.<p>ಏಕಸದಸ್ಯ ನ್ಯಾಯಪೀಠದ ಈ ಆದೇಶವನ್ನು ಪ್ರಶ್ನಿಸಿ ಜೋಶಿ ವಿಭಾಗೀಯ ನ್ಯಾಯಪೀಠದಲ್ಲಿ ರಿಟ್ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ವಿಜಯಕುಮಾರ್ ಎ.ಪಾಟೀಲ್ ಅವರಿದ್ದ ನ್ಯಾಯಪೀಠ ವಿಚಾರಣೆ ಸೋಮವಾರ (ಫೆ.16) ನಡೆಸಿತು.</p>.<p>ವಿಚಾರಣೆ ವೇಳೆ ನ್ಯಾಯಪೀಠ, ‘ನಿಮ್ಮ ಮೇಲ್ಮನವಿ ವಿಚಾರಣೆಗೆ ಯೋಗ್ಯವಾಗಿಲ್ಲ. ಹಾಗಾಗಿ, ಹಿಂಪಡೆಯಲು ಅವಕಾಶ ನೀಡುತ್ತಿದ್ದೇವೆ. ವಾದ ಮುಂದುವರೆಸಲು ಅವಕಾಶ ನೀಡುತ್ತೇವಾದರೂ, ಮೇಲ್ಮನವಿ ಕ್ಷುಲ್ಲಕ ಎಂದು ಕಂಡುಬಂದಲ್ಲಿ ₹1 ಲಕ್ಷ ದಂಡ ವಿಧಿಸಲಾಗುವುದು’ ಎಂಬ ಮೌಖಿಕ ಎಚ್ಚರಿಕೆ ನೀಡಿತು. ಈ ಎಚ್ಚರಿಕೆ ಹಿನ್ನೆಲೆಯಲ್ಲಿ ಮಹೇಶ ಜೋಶಿ ಮಂಗಳವಾರ ನ್ಯಾಯಪೀಠಕ್ಕೆ ಮೆಮೊ ಸಲ್ಲಿಸುವ ಮೂಲಕ ತಮ್ಮ ಮೇಲ್ಮನವಿ ಹಿಂಪಡೆದಿದ್ದಾರೆ.</p>.<p>ಮೇಲ್ಮನವಿಯಲ್ಲಿ ನವದೆಹಲಿಯ ಕೇಂದ್ರ ಮಾಹಿತಿ ಆಯೋಗದ ರಿಜಿಸ್ಟ್ರಾರ್, ಬಿ.ಅಶೋಕ್, ಎನ್.ಕೆ.ಮೋಹನ್ ರಾಂ ಮತ್ತು ಬೆಂಗಳೂರಿನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಪ್ರತಿವಾದಿಗಳನ್ನಾಗಿ ಕಾಣಿಸಲಾಗಿತ್ತು. ಅಶೋಕ್ ಮತ್ತು ಮೋಹನ್ ರಾಂ ಪರ ಹೈಕೋರ್ಟ್ ವಕೀಲ ಮಂಜುನಾಥ್ ಖಾಂಡೇಕರ್ ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ವಿಚಾರಣೆ ವೇಳೆ ನಿಮ್ಮ ಮೇಲ್ಮನವಿ ಏನಾದರೂ ಕ್ಷುಲ್ಲಕ ಎಂದು ಕಂಡು ಬಂದಲ್ಲಿ ₹1 ಲಕ್ಷ ದಂಡ ವಿಧಿಸಲಾಗುವುದು’ ಎಂದು ಹೈಕೋರ್ಟ್ ಮೌಖಿಕವಾಗಿ ಎಚ್ಚರಿಸಿದ ಬೆನ್ನಲ್ಲೇ, ಮಹೇಶ ಜೋಶಿ ಅವರು ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ತಮ್ಮ ಮೇಲ್ಮನವಿಯನ್ನು ಹಿಂಪಡೆದಿದ್ದಾರೆ. ಇದರಿಂದಾಗಿ ಮಾಹಿತಿ ನಿರಾಕರಣೆ ಆರೋಪಕ್ಕೆ ಸಂಬಂಧಿಸಿದಂತೆ ₹25 ಸಾವಿರ ದಂಡ ಪಾವತಿಸುವ ಅನಿವಾರ್ಯ ಅವರಿಗೆ ಎದುರಾಗಿದೆ.</p>.<p>‘ಬೆಂಗಳೂರು ದೂರದರ್ಶನ’ಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿ ಕೋರಿ ಬಿ.ಅಶೋಕ್ ಮತ್ತು ಎನ್.ಕೆ.ಮೋಹನ್ ರಾಂ 2008-09ರ ಅವಧಿಯಲ್ಲಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಅಂದಿನ ದೂರದರ್ಶನ ಮಾಹಿತಿ ಅಧಿಕಾರಿ ಹಾಗೂ ಕೇಂದ್ರದ ನಿರ್ದೇಶಕರಾಗಿದ್ದ ಮಹೇಶ ಜೋಶಿ ಮಾಹಿತಿ ನೀಡಲು ನಿರಾಕರಿಸಿದ್ದರಲ್ಲದೆ, ಮಾಹಿತಿ ಒದಗಿಸಬೇಕಾದರೆ ₹50,160 ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು.</p>.<p>ಇದನ್ನು ಪ್ರಶ್ನಿಸಲಾಗಿದ್ದ ಅರ್ಜಿದಾರರ ಮನವಿಯನ್ನು ಕೇಂದ್ರ ಮಾಹಿತಿ ಹಕ್ಕು ಆಯೋಗ ಪುರಸ್ಕರಿಸಿತ್ತು. ‘ಮಾಹಿತಿ ನೀಡದ ಮಹೇಶ ಜೋಶಿ ಕ್ರಮ ಸರಿಯಲ್ಲ ಹಾಗೂ ಮಾಹಿತಿ ನಿರಾಕರಿಸುವ ಮೂಲಕ ಅವರು ದಂಡಕ್ಕೆ ಅರ್ಹರು’ ಎಂದು ತೀರ್ಮಾನಿಸಿ ₹25 ಸಾವಿರ ದಂಡ ವಿಧಿಸಿ, ಅದನ್ನು ಅವರ ಸಂಬಳದಿಂದಲೇ ವಸೂಲು ಮಾಡುವಂತೆ ಆದೇಶಿಸಿತ್ತು.</p>.<p>ಈ ಆದೇಶ ಪ್ರಶ್ನಿಸಿ ಜೋಶಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ, ಜೋಶಿ ಮನವಿಯನ್ನು ವಜಾಗೊಳಿಸಿತ್ತು. ‘ಜೋಶಿಯವರ ಧೋರಣೆ ಒಬ್ಬ ಸರ್ಕಾರಿ ಅಧಿಕಾರಿಯ ಗುಣವಲ್ಲ. ಈ ಹಿನ್ನೆಲೆಯಲ್ಲಿ ಆಯೋಗ ನೀಡಿರುವ ಆದೇಶ ಸಮಂಜಸವಾಗಿಯೇ ಇದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಆಯೋಗ ವಿಧಿಸಿದ್ದ ₹25 ಸಾವಿರ ದಂಡದ ಆದೇಶವನ್ನು ಎತ್ತಿ ಹಿಡಿದಿತ್ತು.</p>.<p>ಏಕಸದಸ್ಯ ನ್ಯಾಯಪೀಠದ ಈ ಆದೇಶವನ್ನು ಪ್ರಶ್ನಿಸಿ ಜೋಶಿ ವಿಭಾಗೀಯ ನ್ಯಾಯಪೀಠದಲ್ಲಿ ರಿಟ್ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ವಿಜಯಕುಮಾರ್ ಎ.ಪಾಟೀಲ್ ಅವರಿದ್ದ ನ್ಯಾಯಪೀಠ ವಿಚಾರಣೆ ಸೋಮವಾರ (ಫೆ.16) ನಡೆಸಿತು.</p>.<p>ವಿಚಾರಣೆ ವೇಳೆ ನ್ಯಾಯಪೀಠ, ‘ನಿಮ್ಮ ಮೇಲ್ಮನವಿ ವಿಚಾರಣೆಗೆ ಯೋಗ್ಯವಾಗಿಲ್ಲ. ಹಾಗಾಗಿ, ಹಿಂಪಡೆಯಲು ಅವಕಾಶ ನೀಡುತ್ತಿದ್ದೇವೆ. ವಾದ ಮುಂದುವರೆಸಲು ಅವಕಾಶ ನೀಡುತ್ತೇವಾದರೂ, ಮೇಲ್ಮನವಿ ಕ್ಷುಲ್ಲಕ ಎಂದು ಕಂಡುಬಂದಲ್ಲಿ ₹1 ಲಕ್ಷ ದಂಡ ವಿಧಿಸಲಾಗುವುದು’ ಎಂಬ ಮೌಖಿಕ ಎಚ್ಚರಿಕೆ ನೀಡಿತು. ಈ ಎಚ್ಚರಿಕೆ ಹಿನ್ನೆಲೆಯಲ್ಲಿ ಮಹೇಶ ಜೋಶಿ ಮಂಗಳವಾರ ನ್ಯಾಯಪೀಠಕ್ಕೆ ಮೆಮೊ ಸಲ್ಲಿಸುವ ಮೂಲಕ ತಮ್ಮ ಮೇಲ್ಮನವಿ ಹಿಂಪಡೆದಿದ್ದಾರೆ.</p>.<p>ಮೇಲ್ಮನವಿಯಲ್ಲಿ ನವದೆಹಲಿಯ ಕೇಂದ್ರ ಮಾಹಿತಿ ಆಯೋಗದ ರಿಜಿಸ್ಟ್ರಾರ್, ಬಿ.ಅಶೋಕ್, ಎನ್.ಕೆ.ಮೋಹನ್ ರಾಂ ಮತ್ತು ಬೆಂಗಳೂರಿನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಪ್ರತಿವಾದಿಗಳನ್ನಾಗಿ ಕಾಣಿಸಲಾಗಿತ್ತು. ಅಶೋಕ್ ಮತ್ತು ಮೋಹನ್ ರಾಂ ಪರ ಹೈಕೋರ್ಟ್ ವಕೀಲ ಮಂಜುನಾಥ್ ಖಾಂಡೇಕರ್ ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>