ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನಗತ್ಯ ಟೀಕೆ ಮಾಡುತ್ತಾರೆ. ರಾಮ ಮಂದಿರವನ್ನು ಬೇರೆ ಸ್ಥಳದಲ್ಲಿ ಕಟ್ಟಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಹ ಈಚೆಗೆ ಟೀಕಿಸಿದ್ದರು. ಅವರು ಯಾವಾಗ ಸರ್ವೆ ಇಲಾಖೆಗೆ ಸೇರಿದರು ಎಂದು ಪ್ರಶ್ನಿಸಿದ ಅವರು, ಶುದ್ಧ ಚಾರಿತ್ಯ ಇರುವವರಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡುವುದಿಲ್ಲ. ಹರಿಪ್ರಸಾದ್ ಅಂಥವರನ್ನು ಕಡೆಗಣಿಸುತ್ತದೆ ಎಂದರು.