ತಿಂಗಳೊಳಗೆ ಪರಿಹಾರ: ‘ರಾಜ್ಯದಾದ್ಯಂತ ಮಳೆ ಮುಂದುವರಿದಿರುವ ಕಾರಣ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಸೆಪ್ಟೆಂಬರ್ಗೆ ಮುಗಿಯಬೇಕಾಗಿದ್ದ ಮುಂಗಾರು ಮಳೆ ಅಕ್ಟೋಬರ್ ಬಂದರೂ ಮುಗಿದಿಲ್ಲ. ಹೀಗಾಗಿ ರೈತರು ಬೆಳೆದ ಬೆಳೆಗಳು ಹಾನಿಯಾಗಿವೆ, ಮನೆಗಳು ಕುಸಿದು ಬಿದ್ದಿವೆ, ರಸ್ತೆ, ಸೇತುವೆಗಳಿಗೆ ತೀವ್ರ ಹಾನಿಯುಂಟಾಗಿದೆ’ ಎಂದರು.