‘ವಿದ್ಯಾರ್ಥಿನಿಯ ಸಮಸ್ಯೆ ವಿಚಾರಣೆ ಮಾಡಲು ಬಂದಿದ್ದೇನೆ. ಗುರುವಾರ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆದು, ಬಳಿಕ ಕಾಲೇಜಿನ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳನ್ನು ಭೇಟಿ ಮಾಡುತ್ತೇನೆ. ಪ್ರಕರಣದ ಸ್ವರೂಪವನ್ನು ಅರಿಯಬೇಕಾಗಿದ್ದು, ಎರಡು ದಿನ ಉಡುಪಿಯಲ್ಲಿದ್ದುಕೊಂಡು ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರ ಜತೆ ಮಾತನಾಡುತ್ತೇನೆ’ ಎಂದು ಖುಷ್ಬು ಮಾಧ್ಯಮದವರಿಗೆ ತಿಳಿಸಿದರು.
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಅವರು, ‘ಇಂತಹ ಕೃತ್ಯಗಳಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿರುವುದು ನಿಜಕ್ಕೂ ವಿಷಾದನೀಯ. ಮಹಿಳೆಯರ ಘನತೆಗೆ ಚ್ಯುತಿ ತರುವ ಕೆಲಸವನ್ನು ಯಾರೂ ಮಾಡಬಾರದು’ ಎಂದಿದ್ದರು.