ಅಗರಬತ್ತಿ ತಯಾರಕರು ಕಚ್ಛಾ ವಸ್ತುಗಳ ಲಭ್ಯತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಈಶಾನ್ಯ ರಾಜ್ಯಗಳಿಂದ ಕರ್ನಾಟಕಕ್ಕೆ ಬಿದಿರನ್ನು ಖರೀದಿಸಿ ತರಿಸುವುದು ಸವಾಲಾಗಿದೆ. ಈ ಉದ್ಯಮಕ್ಕೆ ವಾಣಿಜ್ಯ, ಹಣಕಾಸು, ಅರಣ್ಯ ಮತ್ತು ಇತರ ಸಚಿವಾಲಯಗಳ ಸಹಾಯದ ಅಗತ್ಯವಿದೆ. ಸರ್ಕಾರವು ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ನಿವಾರಿಸದಿದ್ದರೆ, ಭಾರತೀಯ ಅಗರಬತ್ತಿ ಉದ್ಯಮವು ಆಗ್ನೇಯ ಏಷ್ಯಾ ಮತ್ತು ಕೆಲವು ಆಫ್ರಿಕನ್ ದೇಶಗಳ ಮುಂದೆ ತನ್ನ ಮಾರುಕಟ್ಟೆ ಕಳೆದುಕೊಳ್ಳುವ ಆತಂಕವಿದೆ ಎಂದು ಅವರು ತಿಳಿಸಿದರು.