ಕೊಪ್ಪಳದ ಡಿಎಸ್ಪಿ ನೀಡಿರುವ ವರದಿ ಆಧರಿಸಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಾರ್ಯದರ್ಶಿ, ಈ ಎರಡೂ ಇಲಾಖೆಗಳ ಆಯುಕ್ತರು, ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರು, ಜಿಲ್ಲಾಧಿಕಾರಿ ಮತ್ತಿತರರಿಗೆ ನೋಟಿಸ್ ಜಾರಿ ಮಾಡಲು ನ್ಯಾ. ಶೆಟ್ಟಿ ಸೂಚಿಸಿದ್ದಾರೆ. ನೋಟಿಸ್ಗೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಹೇಳಲಾಗಿದೆ.