ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಬಿಜೆಪಿ ಈ ಸಲ ಒಂದಂಕಿ ಸಂಖ್ಯೆ ದಾಟುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭಾನುವಾರ ಬೀದರ್ನಲ್ಲಿ ಹೇಳಿದರು. ಈ ಸಲ ಕಾಂಗ್ರೆಸ್ ಪಕ್ಷವು ಯುವಕರು, ಮಹಿಳೆಯರಿಗೆ ಟಿಕೆಟ್ ನೀಡಿದೆ. ಈ ಹಿಂದೆ ಬಿಜೆಪಿಯವರು ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳಲ್ಲಿ ಗೆಲ್ಲಲ್ಲಿದ್ದೇವೆ ಎಂದು ಹೇಳುತ್ತಿದ್ದರು. ಈಗ ಎಂಟು ಸ್ಥಾನಗಳಲ್ಲಿಯೂ ಅವರಿಗೆ ಭರವಸೆ ಉಳಿದಿಲ್ಲ’ ಎಂದರು.