'ಹಾಲಿ,ಮಾಜಿ ಸಿಎಂಗಳು ಗಲ್ಲಿ ರೌಡಿಗಳ ಹಾಗೆ ಮಾತನಾಡುತ್ತಾರೆ' ಎನ್ನುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಅವರ ಹೇಳಿಕೆಗೆ ಸಿಎಂ ಬೊಮ್ಮಾಯಿ, 'ಅವರ ಆರೋಪಕ್ಕೆ, ಹೇಳಿಕೆಗೆ ನಾನ್ಯಾವತ್ತೂ ಪ್ರತಿಕ್ರಿಯಿಸಿಲ್ಲ. ಅವರು ಪದೇಪದೇ ಆರೋಪ ಮಾಡುತ್ತಲೇ ಇರುತ್ತಾರೆ. ಆ ಕುರಿತು ಹೆಚ್ಚು ಮಾತನಾಡುವ ಅವಶ್ಯಕತೆಯಿಲ್ಲ' ಎಂದು ಪ್ರತಿಕ್ರಿಯಿಸಿದರು.