ಕುಂಭಮೇಳದ ಅಂಗವಾಗಿ ಅ.13ರಂದು ಮಲೆಮಹದೇಶ್ವರ ಬೆಟ್ಟದಿಂದ ಜ್ಯೋತಿಯಾತ್ರೆ ಹೊರಡಲಿದೆ. ಹನೂರು, ಕೊಳ್ಳೇಗಾಲ, ಮಳವಳ್ಳಿ, ಮದ್ದೂರು, ಮಂಡ್ಯ, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಎಸ್, ಕೆ.ಆರ್.ಪೇಟೆ, ಅಂಬಿಗರಹಳ್ಳಿ ಮೂಲಕ ಅ.15ರಂದು ತ್ರಿವೇಣಿ ಸಂಗಮ ತಲುಪಲಿದೆ. ಮಹೋತ್ಸವ ಮತ್ತು ಮಹಾ ಕುಂಭಮೇಳವನ್ನು ಯಶಸ್ವಿಯಾಗಿ ನಡೆಸಲು ಸಭೆ ತೀರ್ಮಾನಿಸಿತು.