<p><strong>ಬೆಂಗಳೂರು:</strong> ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಒಟ್ಟು 12 ನೆಲದಡಿ ನಿಲ್ದಾಣಗಳು ಸೇರಿದಂತೆ 13 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣವಾಗಬೇಕಿದ್ದು, ಇದಕ್ಕಾಗಿ ಸುರಂಗ ಕೊರೆಯುವ ಯಂತ್ರಗಳನ್ನು (ಟಿಬಿಎಂ) ಚೀನಾದಿಂದ ತರಿಸಲಾಗುತ್ತಿದೆ. ಮುಂದಿನ ವಾರದಲ್ಲಿ ಇವು ನಗರಕ್ಕೆ ಬರಲಿವೆ.</p>.<p>‘ನಾಲ್ಕು ಪ್ಯಾಕೇಜ್ಗಳಲ್ಲಿ ಕೆಲಸ ನಿರ್ವಹಿಸಲಾಗುತ್ತಿದ್ದು, ಇದಕ್ಕಾಗಿ 9 ಟಿಬಿಎಂಗಳ ಅವಶ್ಯಕತೆ ಇದೆ. ಚೀನಾದ ‘ಚೀನಾ ರೈಲ್ವೆ ಕನ್ಸ್ಟ್ರಕ್ಷನ್ ಹೆವಿ ಇಂಡಸ್ಟ್ರಿ ಕಾರ್ಪೊರೇಷನ್’ ಕಂಪನಿಯಿಂದ ಈ ಯಂತ್ರಗಳು ಚೆನ್ನೈಗೆ ಬಂದಿದ್ದು, ಮುಂದಿನ ವಾರದಲ್ಲಿ ನಗರಕ್ಕೆ<br />ಬರಲಿವೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಚೀನಾದಲ್ಲಿ ಕೊರೊನಾ ವೈರಸ್ನಿಂದ ಪರಿಸ್ಥಿತಿ ಬಿಗಡಾಯಿಸಿರುವುದರಿಂದ ಯಂತ್ರಗಳು ಬರುವುದು ವಿಳಂಬವಾಗುತ್ತವೆ ಎಂಬ ಆತಂಕವಿತ್ತು. ಆದರೆ, ಟಿಬಿಎಂ ಪೂರೈಸುವ ಕಂಪನಿಯು ಸಕಾಲದಲ್ಲಿ ಯಂತ್ರಗಳನ್ನು ಪೂರೈಸಿದೆ. ವಿಳಂಬವಾಗುವುದಿದ್ದರೆ ಕಂಪನಿಯು ಮೊದಲೇ ಮಾಹಿತಿ ನೀಡುತ್ತಿತ್ತು’ ಎಂದೂ ಅವರು ತಿಳಿಸಿದರು.</p>.<p>‘ಟಿಬಿಎಂಗಳು ಬಂದ ನಂತರ ಅವುಗಳನ್ನು ನೆಲದಾಳದಲ್ಲಿ ಕೂರಿಸಲು ಒಂದು ತಿಂಗಳು ಸಮಯ ಬೇಕಾಗುತ್ತದೆ. ನಂತರವೇ, ಸುರಂಗ ಕೊರೆಯುವ ಕಾರ್ಯಪ್ರಾರಂಭಿಸಲಾಗುತ್ತದೆ’ ಎಂದರು.</p>.<p>‘ಪ್ಯಾಕೇಜ್ 2 ಮತ್ತು ಪ್ಯಾಕೇಜ್ 3ರ ಗುತ್ತಿಗೆಯನ್ನು ಎಲ್ ಆ್ಯಂಡ್ ಟಿ ತೆಗೆದುಕೊಂಡಿದೆ. ಪ್ಯಾಕೇಜ್ 1 ಮತ್ತು 4ರ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.ನಾಲ್ಕು ಟಿಬಿಎಂಗಳು ಶಿವಾಜಿನಗರದಿಂದ ಒಂದು ತಿಂಗಳಲ್ಲಿ ಕಾರ್ಯ ಪ್ರಾರಂಭಿಸಲಿವೆ’ ಎಂದರು.</p>.<p>‘ಮೊದಲ ಎರಡು ಪ್ಯಾಕೇಜ್ನ ಗುತ್ತಿಗೆದಾರರು ಕಟ್ಟಡಗಳ ಸ್ಥಿತಿಯನ್ನು ಅಧ್ಯಯನ ಮಾಡುತ್ತಿದ್ದಾರೆ. ಮೊದಲ ಹಂತದ ಯೋಜನೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಮಾದರಿಯಲ್ಲೇ ಎರಡನೇ ಹಂತದಲ್ಲಿ ಮುನ್ನೆಚ್ಚರಿಕೆ ವಹಿಸಲಾಗುವುದು’ ಎಂದು ತಿಳಿಸಿದರು.</p>.<p>ಗಟ್ಟಿಯಾದ ಬಂಡೆಗಳನ್ನು ಒಡೆಯುವ ಸಾಮರ್ಥ್ಯವನ್ನು ಈ ಯಂತ್ರಗಳು ಹೊಂದಿವೆ. ಸಿಡಿಮದ್ದುಗಳನ್ನು ಅತಿ ಕಡಿಮೆ ಅಥವಾ ಅನಿವಾರ್ಯ ಇದ್ದಲ್ಲಿ ಮಾತ್ರ ಬಳಸಲಾಗುತ್ತದೆ. ದಿನಕ್ಕೆ 2 ಮೀಟರ್ನಿಂದ 2.5 ಮೀಟರ್ನಷ್ಟು ಉದ್ದದ ಸುರಂಗ ಕೊರೆಯುವ ಸಾಮರ್ಥ್ಯ ಇವುಗಳಿಗಿದೆ.</p>.<p><strong>ಕಾಮಗಾರಿ ಎಲ್ಲಿ?:</strong> ಸ್ವಾಗತ್ ಕ್ರಾಸ್ನಿಂದ ನಾಗವಾರದವರೆಗೆ 13 ಕಿ.ಮೀ. ಉದ್ದದ ಸುರಂಗ ನಿರ್ಮಾಣವಾಗಲಿದೆ. ಮೊದಲು ವೆಲ್ಲಾರ ಜಂಕ್ಷನ್, ಶಿವಾಜಿನಗರ ಮಾರ್ಗದಲ್ಲಿ ಕಾಮಗಾರಿ ನಡೆಸಲಾಗುತ್ತದೆ. ನಂತರ, ಬಂಬೂ ಬಜಾರ್ ಹಾಗೂ ಪಾಟರಿ ಟೌನ್ ಕಡೆ ಕಾಮಗಾರಿ ನಡೆಯಲಿದೆ.</p>.<p><strong>ಬೆಲೆ ಎಷ್ಟು? ಸವಾಲುಗಳೇನು?: </strong>ಒಂದು ಟಿಬಿಎಂನ ಬೆಲೆ ಅಂದಾಜು ₹75 ಕೋಟಿ ಇದೆ. ಒಂದು ಟಿಬಿಎಂ ಚಲಾಯಿಸಲು 14 ಮೆಗಾವಾಟ್ ವಿದ್ಯುತ್ ಪೂರೈಸಬೇಕಾಗುತ್ತದೆ. ಕಾಮಗಾರಿ ವೇಳೆ ಅಪಾರ ಪ್ರಮಾಣದ ಮಣ್ಣನ್ನು ಹೊರತೆಗೆಯಬೇಕಾಗುತ್ತದೆ. ಈ ಮಣ್ಣಿನ ವಿಲೇವಾರಿ ಸವಾಲಿನದ್ದಾಗಿರುತ್ತದೆ. 13 ಕಿ.ಮೀ. ಉದ್ದದ ಸುರಂಗ ಕೊರೆದರೆ ಅಂದಾಜು 15.56 ಲಕ್ಷ ಮಣ್ಣನ್ನು ವಿಲೇವಾರಿ ಮಾಡಬೇಕಾಗುತ್ತದೆ. ಈ ಭಾಗದಲ್ಲಿ ಹೆಚ್ಚು ಜನಸಂಖ್ಯೆಯಿದ್ದು, ಹಳೆಯ ಕಟ್ಟಡಗಳು ಬಹಳಷ್ಟಿವೆ. ಜನ ಆತಂಕಕ್ಕೆ ಒಳಗಾಗದಂತೆ, ಕಟ್ಟಡಗಳಿಗೂ ಹಾನಿಯಾಗದಂತೆ ಕಾಮಗಾರಿ ನಡೆಸಬೇಕಾಗಿದೆ.</p>.<p><strong>‘ಶೇ 34ರಷ್ಟು ಮಾತ್ರ ಬಂಡೆಗಲ್ಲು’</strong></p>.<p>ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಿರುವ ಸ್ಥಳಗಳಲ್ಲಿ ನಿಗಮವು ಭೂವೈಜ್ಞಾನಿಕ ಪರೀಕ್ಷೆ ನಡೆಸಿದ್ದು, ಈ ಸ್ಥಳದಲ್ಲಿ ಶೇ 34ರಷ್ಟು ಮಾತ್ರ ಬಂಡೆಗಲ್ಲುಗಳು ಇರುವುದು ಗೊತ್ತಾಗಿದೆ.</p>.<p>ನಮ್ಮ ಮೆಟ್ರೊ ಮೊದಲ ಹಂತದ ವೇಳೆ, ಹೆಚ್ಚಿನ ಪ್ರಮಾಣದಲ್ಲಿ ಕಲ್ಲು ಬಂಡೆಗಳು ಎದುರಾಗಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು. ಈ ಬಾರಿ, ಶೇ 46ರಷ್ಟು ಮೆದು ಮಣ್ಣು ಇದ್ದು, ಉಳಿದ ಶೇ 20ರಷ್ಟು ಮೆದು ಮತ್ತು ಬಂಡೆಗಳ ಮಿಶ್ರಣವಿದೆ.</p>.<p>‘ಬಂಡೆಗಲ್ಲು ಇದ್ದರೆ ದಿನವೊಂದಕ್ಕೆ 2.4 ಮೀಟರ್ನಷ್ಟು ಸುರಂಗವನ್ನು ಟಿಬಿಎಂ ಕೊರೆಯುತ್ತದೆ. ಅದೇ, ಮೆದು ಮಣ್ಣು ಇದ್ದರೆ 5 ಮೀಟರ್ನಷ್ಟು ಉದ್ದ ಕೊರೆಯಬಹುದು’ ಎಂದು ಯಶವಂತ ಚೌಹಾಣ್ ಹೇಳಿದರು.</p>.<p>‘ಯಾವುದೇ ಪರೀಕ್ಷೆ ನಡೆಸಿದ್ದರೂ ಕಾಮಗಾರಿ ಪ್ರಾರಂಭವಾದ ಮೇಲೆ ಎಂತಹ ಸವಾಲುಗಳು ಎದುರಾಗುತ್ತವೆಯೋ ಹೇಳಲಾಗದು’ ಎಂದೂ ಅವರೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಒಟ್ಟು 12 ನೆಲದಡಿ ನಿಲ್ದಾಣಗಳು ಸೇರಿದಂತೆ 13 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣವಾಗಬೇಕಿದ್ದು, ಇದಕ್ಕಾಗಿ ಸುರಂಗ ಕೊರೆಯುವ ಯಂತ್ರಗಳನ್ನು (ಟಿಬಿಎಂ) ಚೀನಾದಿಂದ ತರಿಸಲಾಗುತ್ತಿದೆ. ಮುಂದಿನ ವಾರದಲ್ಲಿ ಇವು ನಗರಕ್ಕೆ ಬರಲಿವೆ.</p>.<p>‘ನಾಲ್ಕು ಪ್ಯಾಕೇಜ್ಗಳಲ್ಲಿ ಕೆಲಸ ನಿರ್ವಹಿಸಲಾಗುತ್ತಿದ್ದು, ಇದಕ್ಕಾಗಿ 9 ಟಿಬಿಎಂಗಳ ಅವಶ್ಯಕತೆ ಇದೆ. ಚೀನಾದ ‘ಚೀನಾ ರೈಲ್ವೆ ಕನ್ಸ್ಟ್ರಕ್ಷನ್ ಹೆವಿ ಇಂಡಸ್ಟ್ರಿ ಕಾರ್ಪೊರೇಷನ್’ ಕಂಪನಿಯಿಂದ ಈ ಯಂತ್ರಗಳು ಚೆನ್ನೈಗೆ ಬಂದಿದ್ದು, ಮುಂದಿನ ವಾರದಲ್ಲಿ ನಗರಕ್ಕೆ<br />ಬರಲಿವೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಚೀನಾದಲ್ಲಿ ಕೊರೊನಾ ವೈರಸ್ನಿಂದ ಪರಿಸ್ಥಿತಿ ಬಿಗಡಾಯಿಸಿರುವುದರಿಂದ ಯಂತ್ರಗಳು ಬರುವುದು ವಿಳಂಬವಾಗುತ್ತವೆ ಎಂಬ ಆತಂಕವಿತ್ತು. ಆದರೆ, ಟಿಬಿಎಂ ಪೂರೈಸುವ ಕಂಪನಿಯು ಸಕಾಲದಲ್ಲಿ ಯಂತ್ರಗಳನ್ನು ಪೂರೈಸಿದೆ. ವಿಳಂಬವಾಗುವುದಿದ್ದರೆ ಕಂಪನಿಯು ಮೊದಲೇ ಮಾಹಿತಿ ನೀಡುತ್ತಿತ್ತು’ ಎಂದೂ ಅವರು ತಿಳಿಸಿದರು.</p>.<p>‘ಟಿಬಿಎಂಗಳು ಬಂದ ನಂತರ ಅವುಗಳನ್ನು ನೆಲದಾಳದಲ್ಲಿ ಕೂರಿಸಲು ಒಂದು ತಿಂಗಳು ಸಮಯ ಬೇಕಾಗುತ್ತದೆ. ನಂತರವೇ, ಸುರಂಗ ಕೊರೆಯುವ ಕಾರ್ಯಪ್ರಾರಂಭಿಸಲಾಗುತ್ತದೆ’ ಎಂದರು.</p>.<p>‘ಪ್ಯಾಕೇಜ್ 2 ಮತ್ತು ಪ್ಯಾಕೇಜ್ 3ರ ಗುತ್ತಿಗೆಯನ್ನು ಎಲ್ ಆ್ಯಂಡ್ ಟಿ ತೆಗೆದುಕೊಂಡಿದೆ. ಪ್ಯಾಕೇಜ್ 1 ಮತ್ತು 4ರ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.ನಾಲ್ಕು ಟಿಬಿಎಂಗಳು ಶಿವಾಜಿನಗರದಿಂದ ಒಂದು ತಿಂಗಳಲ್ಲಿ ಕಾರ್ಯ ಪ್ರಾರಂಭಿಸಲಿವೆ’ ಎಂದರು.</p>.<p>‘ಮೊದಲ ಎರಡು ಪ್ಯಾಕೇಜ್ನ ಗುತ್ತಿಗೆದಾರರು ಕಟ್ಟಡಗಳ ಸ್ಥಿತಿಯನ್ನು ಅಧ್ಯಯನ ಮಾಡುತ್ತಿದ್ದಾರೆ. ಮೊದಲ ಹಂತದ ಯೋಜನೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಮಾದರಿಯಲ್ಲೇ ಎರಡನೇ ಹಂತದಲ್ಲಿ ಮುನ್ನೆಚ್ಚರಿಕೆ ವಹಿಸಲಾಗುವುದು’ ಎಂದು ತಿಳಿಸಿದರು.</p>.<p>ಗಟ್ಟಿಯಾದ ಬಂಡೆಗಳನ್ನು ಒಡೆಯುವ ಸಾಮರ್ಥ್ಯವನ್ನು ಈ ಯಂತ್ರಗಳು ಹೊಂದಿವೆ. ಸಿಡಿಮದ್ದುಗಳನ್ನು ಅತಿ ಕಡಿಮೆ ಅಥವಾ ಅನಿವಾರ್ಯ ಇದ್ದಲ್ಲಿ ಮಾತ್ರ ಬಳಸಲಾಗುತ್ತದೆ. ದಿನಕ್ಕೆ 2 ಮೀಟರ್ನಿಂದ 2.5 ಮೀಟರ್ನಷ್ಟು ಉದ್ದದ ಸುರಂಗ ಕೊರೆಯುವ ಸಾಮರ್ಥ್ಯ ಇವುಗಳಿಗಿದೆ.</p>.<p><strong>ಕಾಮಗಾರಿ ಎಲ್ಲಿ?:</strong> ಸ್ವಾಗತ್ ಕ್ರಾಸ್ನಿಂದ ನಾಗವಾರದವರೆಗೆ 13 ಕಿ.ಮೀ. ಉದ್ದದ ಸುರಂಗ ನಿರ್ಮಾಣವಾಗಲಿದೆ. ಮೊದಲು ವೆಲ್ಲಾರ ಜಂಕ್ಷನ್, ಶಿವಾಜಿನಗರ ಮಾರ್ಗದಲ್ಲಿ ಕಾಮಗಾರಿ ನಡೆಸಲಾಗುತ್ತದೆ. ನಂತರ, ಬಂಬೂ ಬಜಾರ್ ಹಾಗೂ ಪಾಟರಿ ಟೌನ್ ಕಡೆ ಕಾಮಗಾರಿ ನಡೆಯಲಿದೆ.</p>.<p><strong>ಬೆಲೆ ಎಷ್ಟು? ಸವಾಲುಗಳೇನು?: </strong>ಒಂದು ಟಿಬಿಎಂನ ಬೆಲೆ ಅಂದಾಜು ₹75 ಕೋಟಿ ಇದೆ. ಒಂದು ಟಿಬಿಎಂ ಚಲಾಯಿಸಲು 14 ಮೆಗಾವಾಟ್ ವಿದ್ಯುತ್ ಪೂರೈಸಬೇಕಾಗುತ್ತದೆ. ಕಾಮಗಾರಿ ವೇಳೆ ಅಪಾರ ಪ್ರಮಾಣದ ಮಣ್ಣನ್ನು ಹೊರತೆಗೆಯಬೇಕಾಗುತ್ತದೆ. ಈ ಮಣ್ಣಿನ ವಿಲೇವಾರಿ ಸವಾಲಿನದ್ದಾಗಿರುತ್ತದೆ. 13 ಕಿ.ಮೀ. ಉದ್ದದ ಸುರಂಗ ಕೊರೆದರೆ ಅಂದಾಜು 15.56 ಲಕ್ಷ ಮಣ್ಣನ್ನು ವಿಲೇವಾರಿ ಮಾಡಬೇಕಾಗುತ್ತದೆ. ಈ ಭಾಗದಲ್ಲಿ ಹೆಚ್ಚು ಜನಸಂಖ್ಯೆಯಿದ್ದು, ಹಳೆಯ ಕಟ್ಟಡಗಳು ಬಹಳಷ್ಟಿವೆ. ಜನ ಆತಂಕಕ್ಕೆ ಒಳಗಾಗದಂತೆ, ಕಟ್ಟಡಗಳಿಗೂ ಹಾನಿಯಾಗದಂತೆ ಕಾಮಗಾರಿ ನಡೆಸಬೇಕಾಗಿದೆ.</p>.<p><strong>‘ಶೇ 34ರಷ್ಟು ಮಾತ್ರ ಬಂಡೆಗಲ್ಲು’</strong></p>.<p>ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಿರುವ ಸ್ಥಳಗಳಲ್ಲಿ ನಿಗಮವು ಭೂವೈಜ್ಞಾನಿಕ ಪರೀಕ್ಷೆ ನಡೆಸಿದ್ದು, ಈ ಸ್ಥಳದಲ್ಲಿ ಶೇ 34ರಷ್ಟು ಮಾತ್ರ ಬಂಡೆಗಲ್ಲುಗಳು ಇರುವುದು ಗೊತ್ತಾಗಿದೆ.</p>.<p>ನಮ್ಮ ಮೆಟ್ರೊ ಮೊದಲ ಹಂತದ ವೇಳೆ, ಹೆಚ್ಚಿನ ಪ್ರಮಾಣದಲ್ಲಿ ಕಲ್ಲು ಬಂಡೆಗಳು ಎದುರಾಗಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು. ಈ ಬಾರಿ, ಶೇ 46ರಷ್ಟು ಮೆದು ಮಣ್ಣು ಇದ್ದು, ಉಳಿದ ಶೇ 20ರಷ್ಟು ಮೆದು ಮತ್ತು ಬಂಡೆಗಳ ಮಿಶ್ರಣವಿದೆ.</p>.<p>‘ಬಂಡೆಗಲ್ಲು ಇದ್ದರೆ ದಿನವೊಂದಕ್ಕೆ 2.4 ಮೀಟರ್ನಷ್ಟು ಸುರಂಗವನ್ನು ಟಿಬಿಎಂ ಕೊರೆಯುತ್ತದೆ. ಅದೇ, ಮೆದು ಮಣ್ಣು ಇದ್ದರೆ 5 ಮೀಟರ್ನಷ್ಟು ಉದ್ದ ಕೊರೆಯಬಹುದು’ ಎಂದು ಯಶವಂತ ಚೌಹಾಣ್ ಹೇಳಿದರು.</p>.<p>‘ಯಾವುದೇ ಪರೀಕ್ಷೆ ನಡೆಸಿದ್ದರೂ ಕಾಮಗಾರಿ ಪ್ರಾರಂಭವಾದ ಮೇಲೆ ಎಂತಹ ಸವಾಲುಗಳು ಎದುರಾಗುತ್ತವೆಯೋ ಹೇಳಲಾಗದು’ ಎಂದೂ ಅವರೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>