ಮೈಸೂರು ಮೃಗಾಲಯಕ್ಕೆ 2,023 ಜನ ದೇಣಿಗೆ ನೀಡಿದ್ದು, ಒಟ್ಟು ₹51.75 ಲಕ್ಷ ಸಂಗ್ರಹವಾಗಿದೆ. ಬನ್ನೇರುಘಟ್ಟಕ್ಕೆ ₹29.83 ಲಕ್ಷ ನೆರವು ಸಿಕ್ಕಿದ್ದು, 918 ಜನ ದೇಣಿಗೆ ಕೊಟ್ಟಿದ್ದಾರೆ. ಶಿವಮೊಗ್ಗ ಮೃಗಾಲಯಕ್ಕೆ ₹7.24 ಲಕ್ಷ ನೆರವು ಹರಿದು ಬಂದಿದ್ದು, 146 ಜನ ದೇಣಿಗೆ ನೀಡಿದ್ದಾರೆ. ಗದಗ, ಹಂಪಿ, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ, ಕಲಬುರ್ಗಿ ನಂತರದ ಸ್ಥಾನದಲ್ಲಿವೆ. ನಟರಾದ ಉಪೇಂದ್ರ, ಸೃಜನ್ ಲೋಕೇಶ್, ಚಿಕ್ಕಣ್ಣ, ಶೈಲಜಾ ನಾಗ, ದೇವರಾಜ ಪ್ರಾಣಿಗಳನ್ನು ದತ್ತು ಪಡೆದವರಲ್ಲಿ ಪ್ರಮುಖರು.