ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹ ಪ್ರತಿಷ್ಠಾಪನೆ ನಿಮಿತ್ತ ರಜೆ ಘೋಷಣೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿಲ್ಲ ಎಂದು ಸುದ್ದಿಗಾರರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ನವರು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಾರೆ. ಅಲ್ಲಿ ಹೋದರೆ ಹಂಗಾಗುತ್ತೆ, ಇಲ್ಲಿ ಹೋದರೆ ಹಿಂಗಾಗುತ್ತೆ ಎಂದು ವಿಚಾರ ಮಾಡುತ್ತಾರೆ. ಅದು ಕನ್ಫ್ಯೂಸ್ಡ್ ಪಾರ್ಟಿ ವಿತ್ ಕನ್ಫ್ಯೂಸ್ಡ್ ಲೀಡರ್ (ಗೊಂದಲದ ನಾಯಕನಿರುವ ಗೊಂದಲದ ಪಕ್ಷ)’ ಎಂದು ಹೀಗಳೆದರು.
‘ರಜೆ ನೀಡಲು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಕೇಳಿರಬಹುದು, ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಂತರ ಅವರು ನಿರ್ಣಯ ತಿಳಿಸಬಹುದು. ಆವಾಗ ಸಿದ್ದರಾಮಯ್ಯ ತೀರ್ಮಾನ ತೆಗೆದುಕೊಳ್ಳುವಷ್ಟರಲ್ಲಿ ಪ್ರಾಣ ಪ್ರತಿಷ್ಠಾಪನೆ ಮುಗಿದಿರುತ್ತದೆ. ದೇಶದಲ್ಲಿ ಮೂರು ಕಡೆ ಈಗ ಕಾಂಗ್ರೆಸ್ ಸರ್ಕಾರ ಇದೆ. ಮುಂಬರುವ ದಿನಗಳಲ್ಲಿ ಆ ಮೂರು ಕಡೆಯೂ ಇರಲ್ಲ, ರಾಮನ ಶಾಪ ಅವರಿಗೆ ತಟ್ಟುತ್ತದೆ’ ಎಂದು ಕುಟುಕಿದರು.
‘ಬೆಂಗಳೂರಿನಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಸಭೆ ನಡೆಯುತ್ತಿದೆ. ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ಆಯ್ಕೆ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ’ ಎಂದು ಅವರು ಪ್ರತಿಕ್ರಿಯಿಸಿದರು.