ಡಿವೈಎಸ್ಪಿ ಪುರುಷೋತ್ತಮ್, ರಾಮನಗರ ಗ್ರಾಮೀಣ ಸಿಪಿಐ ಜೀವನ್ ನೇತೃತ್ವದ ತಂಡಗಳು ಆರೋಪಿಗಾಗಿ ಹುಡುಕಾಡುತ್ತಿವೆ. ಒಂದು ತಂಡವು ಬೆಂಗಳೂರಿನಲ್ಲೂ, ಉಳಿದ ತಂಡಗಳು ಬಳ್ಳಾರಿ, ಮೈಸೂರು ಮೊದಲಾದ ಕಡೆಗಳಲ್ಲಿ ಶೋಧ ನಡೆಸಿವೆ. ಶಾಸಕರ ಆಪ್ತರ ಮೂಲಕ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆದಿದೆ. ಆರೋಪಿಯು ಹೈದರಾಬಾದ್ ಕಡೆಗೆ ತೆರಳಿರುವ ಶಂಕೆಯೂ ವ್ಯಕ್ತವಾಗಿದೆ.