ಮೈಸೂರು: ಮನೆಗೆ ಬೆಂಕಿ ಹಚ್ಚಿ ಒಂದೇ ಕುಟುಂಬದ ನಾಲ್ವರನ್ನು ಕೊಂದ ಪ್ರಕರಣದಲ್ಲಿ ಐವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹ 2 ಲಕ್ಷ ದಂಡ ವಿಧಿಸಿ , ಇಲ್ಲಿನ 4ನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ. ಉದಯಗಿರಿಯ ಕೆ.ಎನ್.ಪುರ ಬಡಾವಣೆಯ ನಿವಾಸಿಗಳಾದ ಹಸೀನಾ (35), ಆದಿಲ್ (31), ಜಬೀನಾ (33), ಜರೀನ್ತಾಜ್ (40), ಸಯೀದಾ (60) ಶಿಕ್ಷೆಗೆ ಗುರಿಯಾದವರು. ಪ್ರಕರಣದ ಮತ್ತೊಬ್ಬ ಆರೋಪಿ ಕೌಸರ್ ಮೃತಪಟ್ಟಿದ್ದಾರೆ.