ಪ್ರಕರಣ ದಾಖಲಾದ ಎರಡು ದಿನ ಶಿವಮೂರ್ತಿ ಮುರುಘಾ ಶರಣರೊಂದಿಗೆ ಮಠದಲ್ಲಿಯೇ ಇದ್ದ ಗಂಗಾಧರಯ್ಯ, ಆಗಸ್ಟ್ 28ರ ಬಳಿಕ ತಲೆಮರೆಸಿಕೊಂಡಿದ್ದರು. ತನಿಖಾಧಿಕಾರಿ ಎದುರು ಹಾಜರಾಗುವಂತೆ ಸೆಪ್ಟೆಂಬರ್ 5ರಂದು ನೋಟಿಸ್ ನೀಡಲಾಗಿತ್ತು. ಪ್ರಕರಣದಲ್ಲಿ 17 ವರ್ಷದ ಬಾಲಕ ಹಾಗೂ ಪರಮಶಿವಯ್ಯ ಅವರು ಇನ್ನಿಬ್ಬರು ಆರೋಪಿಗಳಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗಿಲ್ಲ.