ಮಹಾರಾಷ್ಟ್ರದ ಕೊಲ್ಹಾಪುರ ಸೇರಿದಂತೆ ರಾಜ್ಯದ ಧಾರವಾಡ, ಕಲಬುರಗಿ, ಬೆಳಗಾವಿ, ಬೀದರ್, ವಿಜಯಪುರ, ಕೊಪ್ಪಳ, ಗದಗ ಜಿಲ್ಲೆಗಳಿಂದ ಬಂದಿದ್ದ ಐದು ಸಾವಿರಕ್ಕೂ ಅಧಿಕ ಸ್ವಯಂ ಸೇವಕರು, ಹಳೇ ಗಬ್ಬೂರ, ಬಿಡ್ನಾಳ, ನೇಕಾರನಗರ, ಜನ್ನತ್ ನಗರ, ಕೌದಿಮಠ, ಇಂಡಿಪಂಪ್ ಸೇರಿದಂತೆ ಸುಮಾರು 15 ರುದ್ರಭೂಮಿಗಳನ್ನು ಸ್ವಚ್ಛಗೊಳಿಸಿದರು.