ದಾಭೋಲ್ಕರ್ ಹತ್ಯೆ ಪ್ರಕರಣದ ಆರೋಪಿ ಸಚಿನ್ ಪ್ರಕಾಶ್ರಾವ್ ಅಂಧುರೆ ಮತ್ತು ಅಮೋಲ್ ಕಾಳೆ ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿ ಭೇಟಿ ಮಾಡಿದ್ದಾರೆ. ಕಾಳೆ, ಅಂಧುರೆಗೆ ಪಿಸ್ತೂಲ್ ನೀಡಿದ್ದು, ಅದೇ ಪಿಸ್ತೂಲ್ನ್ನು ಅಂಧುರೆ ತನ್ನ ಭಾವ ಶುಭಂ ಸುರ್ಲೆಗೆಕೊಟ್ಟಿದ್ದ. ಸಿಬಿಐ ಮತ್ತು ಮಹಾರಾಷ್ಟ್ರದ ಉಗ್ರ ನಿಗ್ರಹ ದಳ ಸುರ್ಲೆಸ್ನೇಹಿತನ ಮನೆಯಲ್ಲಿ ನಡೆಸಿದ ಪರಿಶೀಲನೆಯಲ್ಲಿ ಪಿಸ್ತೂಲ್ ಪತ್ತೆಯಾಗಿತ್ತು.