ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್ ಮಾತನಾಡಿ, ‘ಕೊರಿಯರ್ ಕಂಪನಿಗಳಿಂದಅಂಚೆ ಇಲಾಖೆಯು ಸವಾಲುಗಳನ್ನು ಎದುರಿ ಸುತ್ತಿದೆ. ಗ್ರಾಹಕರ ಅಪೇಕ್ಷೆಗಳಿಗೆ ತಕ್ಕಂತೆ ಕರ್ತವ್ಯದ ಅವಧಿ ಬದಲಿಸಿಕೊಳ್ಳಬೇಕು. ಹೊಸ ಆಲೋಚನೆಗಳಿಂದ ಸೇವೆಯನ್ನು ವಿಸ್ತರಿಸಿ, ಲಾಭ ಗಳಿಕೆ ಹೆಚ್ಚಿಸಬೇಕು’ ಎಂದರು. ಕಾರ್ಯದರ್ಶಿ ಜನಾರ್ದನ್ ಮಜುಂದಾರ್, ಸಿ.ಸಿ.ಪಿಳ್ಳೈ, ಕೆ.ರಾಘವೇಂದ್ರನ್ ಇದ್ದರು.