‘ಹೆದ್ದಾರಿ ಗುತ್ತಿಗೆದಾರರು ಅವಶ್ಯವಿರುವ ಮಣ್ಣನ್ನು ಸ್ಥಳೀಯವಾಗಿ ಖರೀದಿಸುತ್ತಿದ್ದರು. ಈಗ ಅವರು ಮಣ್ಣನ್ನು ಹೆದ್ದಾರಿ ಪಕ್ಕದಲ್ಲಿರುವ ಕೆರೆಗಳಿಂದಲೇ ತೆಗೆಸಿ ಬಳಸಿಕೊಳ್ಳಬಹುದು. ಇದರಿಂದ ಕೆರೆಯ ಜೀರ್ಣೋದ್ಧಾರವಾಗುತ್ತದೆ. ಕೆರೆಗಳಲ್ಲಿ ನೀರು ನಿಂತು, ಅಂತರ್ಜಲ ವೃದ್ಧಿಸಿದಂತಾಗುತ್ತದೆ. ‘ಅಮೃತ ಸರೋವರ ನಿರ್ಮಾಣ’ ಅಂಗವಾಗಿ ಈ ಯೋಜನೆ ರಾಜ್ಯದಲ್ಲಿಯೂ ಜಾರಿಯಾಗುತ್ತಿದೆ’ ಎಂದು ತಿಳಿಸಿದ್ದಾರೆ.