ಮೈಸೂರು: ಅಪಶಕುನ ಎಂದು ಹೀಗಳೆಯುವ ಗೂಬೆಗೂ ಕಾಳಸಂತೆಯಲ್ಲಿ ₹ 5 ಲಕ್ಷ ಬೆಲೆ ಸಿಗುತ್ತಿದೆ ಎಂದು ಗೂಬೆ ಸಾಗಣೆ ಮಾಡುತ್ತಿದ್ದ ಆರೋಪಿಗಳು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.
ಮೈಸೂರು– ಬೆಂಗಳೂರು ರಸ್ತೆಯಲ್ಲಿ ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ಗೂಬೆ ವಶಪಡಿಸಿಕೊಂಡ ಅರಣ್ಯ ಸಂಚಾರ ದಳದ ಪೊಲೀಸರು, ನಾಗಮಂಗಲ ತಾಲ್ಲೂಕು ಶಿಕಾರಿಪುರದ ಎಸ್.ಆರ್.ಶ್ರೀಧರ್ ಹಾಗೂ ವಿರಾಜಪೇಟೆ ತಾಲ್ಲೂಕಿನ ಬಿಳಗುಂದ ಗ್ರಾಮದ ಬಿ.ಎ.ರವೀಶರಾವ್ ಎಂಬುವರನ್ನು ಬಂಧಿಸಿದ್ದರು.
ಸಾಗಣೆ ಮಾಡುತ್ತಿದ್ದ ಗೂಬೆಯು ‘ಇಂಡಿಯನ್ ಈಗಲ್’ ಗೂಬೆ ತಳಿ ಯಾಗಿದೆ. ಕಾಳಸಂತೆಯಲ್ಲಿ ₹ 5 ಲಕ್ಷಕ್ಕೆ ಮಾರಾಟವಾಗುತ್ತಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ.