ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರಿಫೆರಲ್ ವರ್ತುಲ ರಸ್ತೆ ಮಾರ್ಗಸೂಚಿ ದರ ಆದೇಶ ಹಿಂದಕ್ಕೆ: ಸಚಿವ ಕೃಷ್ಣ ಬೈರೇಗೌಡ

Published 12 ಮಾರ್ಚ್ 2024, 23:53 IST
Last Updated 12 ಮಾರ್ಚ್ 2024, 23:53 IST
ಅಕ್ಷರ ಗಾತ್ರ

ಬೆಂಗಳೂರು: ಪೆರಿಪೆರಲ್‌ ವರ್ತುಲ ರಸ್ತೆಯ ಮಾರ್ಗಸೂಚಿ ದರ ಕಡಿಮೆ ಮಾಡಿಲ್ಲ. ಆದರೆ, ಸರ್ಕಾರ ಹೊರಡಿಸಿದ್ದ ಆದೇಶ ಹಿಂಪಡೆದ ಕಾರಣ ಹಿಂದಿನ ಮಾರ್ಗಸೂಚಿ ದರವೇ ಅಲ್ಲಿಗೆ ಅನ್ವಯವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಯಾವುದೇ ಯೋಜನೆಗಳಿಗೆ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯ ಅಧಿಸೂಚನೆ ಹೊರಡಿಸಿದ ನಂತರ ಆ ಪ್ರದೇಶಗಳಲ್ಲಿನ ಸ್ವತ್ತುಗಳ ಮಾರ್ಗಸೂಚಿ ದರ ಹೆಚ್ಚಳ ಮಾಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ರಾಜ್ಯದ ಇತರೆ ಸ್ವತ್ತುಗಳಿಗೆ ಅನ್ವಯಿಸುವ ಮಾರ್ಗಸೂಚಿ ದರಗಳು ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿರುವ ಪ್ರದೇಶಕ್ಕೆ ಅನ್ವಯವಾಗದು. ಮುಂದೆ ಜಿಲ್ಲಾಧಿಕಾರಿಗಳೇ ಮಾರ್ಗಸೂಚಿ ದರ ನಿಗದಿ ಮಾಡುವರು ಎಂದು ವಿವರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT