ಯಾವುದೇ ಯೋಜನೆಗಳಿಗೆ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯ ಅಧಿಸೂಚನೆ ಹೊರಡಿಸಿದ ನಂತರ ಆ ಪ್ರದೇಶಗಳಲ್ಲಿನ ಸ್ವತ್ತುಗಳ ಮಾರ್ಗಸೂಚಿ ದರ ಹೆಚ್ಚಳ ಮಾಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ರಾಜ್ಯದ ಇತರೆ ಸ್ವತ್ತುಗಳಿಗೆ ಅನ್ವಯಿಸುವ ಮಾರ್ಗಸೂಚಿ ದರಗಳು ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿರುವ ಪ್ರದೇಶಕ್ಕೆ ಅನ್ವಯವಾಗದು. ಮುಂದೆ ಜಿಲ್ಲಾಧಿಕಾರಿಗಳೇ ಮಾರ್ಗಸೂಚಿ ದರ ನಿಗದಿ ಮಾಡುವರು ಎಂದು ವಿವರಿಸಿದರು.