‘ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಪಡಿಸಲು ಪ್ರಧಾನಿಯವರಿಗೆ ಅಡ್ಡಿಯಾಗಿರುವುದು ಏನು? ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರಿಗೆ ಅವಕಾಶ ನೀಡಿದ ರೀತಿಯಲ್ಲಿಯೇ ಪ್ರಜ್ವಲ್ ಅವರಿಗೆ ದೇಶದಿಂದ ಪರಾರಿಯಾಗಲು ಅವಕಾಶ ನೀಡಿದ್ದು ಹೇಗೆ ಮತ್ತು ಏಕೆ’ ಎಂದು ರಮೇಶ್ ಅವರು ಪ್ರಶ್ನೆ ಮಾಡಿದ್ದಾರೆ.