ಬೆಂಗಳೂರು: ಕೇರಳ ಮತ್ತು ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಈ ಸಂದರ್ಭದಲ್ಲಿ ಖಾಸಗಿ ವಿಮಾನ ಸಂಸ್ಥೆಗಳು ಹಣ ಮಾಡುವಲ್ಲಿ ತೊಡಗಿವೆ. ಇದು ನಾಚಿಕೆಯ ಸಂಗತಿ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.
ಪ್ರಸ್ತುತ ಮಂಗಳೂರು–ಬೆಂಗಳೂರು ಮಾರ್ಗದ ವಿಮಾನ ಪ್ರಯಾಣ ದರ ₹18 ಸಾವಿರಕ್ಕೆ ಏರಿದೆ. ಈ ದರ ಸಮಾನ್ಯವಾಗಿ ಸರಾಸರಿ ₹4 ಸಾವಿರಕ್ಕಿಂತ ಹೆಚ್ಚಾಗುವುದಿಲ್ಲ. ಈ ಸಂದರ್ಭದಲ್ಲಿ ಹೆಚ್ಚು ವಿಮಾನಗಳ ಸಂಚಾರಕ್ಕೆ ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹ ಅವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಂಗಳೂರು ವಿಮಾನನಿಲ್ದಾಣ ಕೇರಳಕ್ಕೆ ಅತ್ಯಂತ ಸಮೀಪವಿದೆ. ಕರಾವಳಿಯನ್ನು ಸಂಪರ್ಕಿಸುವ ಬಹುತೇಕ ರಸ್ತೆಗಳು ಹಾನಿಗೊಳಗಾಗಿವೆ. ರೈಲುಗಳು ಸಂಚರಿಸುತ್ತಿಲ್ಲ. ಆದ್ದರಿಂದ, ಜಯಂತ್ ಸಿನ್ಹ ಅವರು ತಕ್ಷಣ ಮಂಗಳೂರು–ಬೆಂಗಳೂರು, ಮಂಗಳೂರು–ಮುಂಬೈ ಸೇರಿದಂತೆ ಇತರ ಎಲ್ಲಾ ವಲಯಗಳ ಮಾರ್ಗಗಳಲ್ಲಿನ ಹೆಚ್ಚಿನ ದರವನ್ನು ಕಡಿತಗೊಳಿಸಿ, ಹೆಚ್ಚು ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಟ್ವಿಟ್ ಮಾಡಿದ್ದಾರೆ.
Private Airlines are at money making Shame !!!
— Sadananda Gowda (@DVSBJP) August 16, 2018
Today Mangalore to Bengaluru ticket rate is Sky rocketed at Rs 18000/-
This route Average rate is never more than Rs 4000/- in this route . It’s the time to introduce more Flights @jayantsinha
Mangalore Airport is near to Kerala State , Most roads connected to Coastal is Affected , Trains not running , Can Sri @jayantsinha intervene immediately to seal a cap on rate Mangalore - Bengaluru , Mangalore - Mumbai and all Sector
— Sadananda Gowda (@DVSBJP) August 16, 2018
ವ್ಯಾಪಕವಾಗಿ ಮಳೆಯಿಂದ ಪ್ರವಾಹ ಎದುರಾಗಿರುವ ಕೇರಳ ವಿಮಾನನಿಲ್ದಾಣವನ್ನು ಆ. 18ರ ವರೆಗೆ ಬಂದ್ ಮಾಡಲಾಗಿದೆ. ಇಲ್ಲಿಂದ ವಿಮಾನಗಳ ಸಂಚಾರ ನಡೆಯುತ್ತಿಲ್ಲ. ಇಲ್ಲಿನ ಜನರಿಗೆ ಸಮೀಪದ ವಿಮಾನನಿಲ್ದಾಣವೆಂದರೆ ಮಂಗಳೂರು ವಿಮಾನನಿಲ್ದಾಣ.
ಇದೇ ವೇಳೆ ಕೇರಳದ ಹಾಗೂ ರಾಜ್ಯದ ಪ್ರವಾಹ ಪರಿಸ್ಥಿತಿಯ ಕುರಿತು ಮತ್ತೊಂದು ಟ್ವಿಟ್ ಮಾಡಿರುವ ಅವರು, ಜನರು ಪ್ರವಾಹ ಸಂಕಷ್ಟದಲ್ಲಿರುವ ನೆರವಿಗೆ ತಂಡೋಪತಂಡವಾಗಿ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಮಳೆಯಿಂದ ತತ್ತರಿಸಿರುವ ಕೇರಳ ರಾಜ್ಯದ ಜನತೆ ಸಹಾಯಕ್ಕೆ ಜನರು ಪಕ್ಷಾತೀತವಾಗಿ ಧಾವಿಸಬೇಕು , ಅಲ್ಲಿ ಔಷದಿ , ಬಟ್ಟೆ , ಆಹಾರ ಕೊರತೆ ಉಂಟಾಗಿದ್ದು , ಕ್ಲಪ್ತ ಸಮಯಕ್ಕೆ ನಮ್ಮ ಸ್ವಯಂ ಸೇವಕರು , ವೈದ್ಯರುಗಳು ಮುಂದಾಗಬೇಕು , @vijayanpinarayi @nalinkateel
— Sadananda Gowda (@DVSBJP) August 16, 2018
ಸ್ವಾಭಿಮಾನಿಗಳಾದ ಧಕ್ಷಿಣ ಕನ್ನಡ,ಉಡುಪಿ , ಮಲೆನಾಡಿನ ಜನರಲ್ಲಿ ವಿನಂತಿ,ಕಂಡು ಕೇಳರಿಯದ ಮಳೆಯಿಂದ ನಮ್ಮಲ್ಲಿ ಹಾನಿ ಉಂಟಾಗಿದೆ ,ದಯವಿಟ್ಟು ಸ್ವಯಂ ಸೇವಕ ತಂಡಗಳನ್ನು ಕಟ್ಟಿಕ್ಕೊಂಡು ನೆರೆಕರೆಯವರ , ಪಕ್ಕದಗ್ರಾಮಗಳ ಸಹಾಯಕ್ಕೆ ಧಾವಿಸಿರಿ , ನಿಮ್ಮೂರಿನದೇವಸ್ಥಾನ,ಭಜನಾ ಮಂದಿರಗಳಲ್ಲಿ ಸಾಮೂಹಿಕ ಭೋಜನ ವ್ಯವಸ್ಥೆ ಮಾಡಿ,ಜಾತಿ ಧರ್ಮ ಮೀರಿ ಮುಂದಾಗಿ .
— Sadananda Gowda (@DVSBJP) August 16, 2018
ಕೊಡಗಿನೆಲ್ಲೆಡೆ ವ್ಯಾಪಕ ಮಳೆಯಾಗುತ್ತಿದ್ದು, ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳುವಂತೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ಅವರು ಮತ್ತೊಂದು ಟ್ವಿಟ್ ಮಾಡಿದ್ದಾರೆ.
ಕೊಡಗಿನಾದ್ಯಂತ ಮಳೆಯು ಎಡೆ ಬಿಡದೆ ಸುರಿಯುತ್ತಿದ್ದು , ಹೆಚ್ಚಿನ ಪ್ರದೇಶಗಳು ದ್ವೀಪದಂತಾಗಿದೆ , ರಸ್ತೆ ಸಂಪರ್ಕ ಕಡಿತಗೊಂಡಿದ್ದು ಜನರು ತೊಂದರೆಗೆ ಸಿಲುಕಿದ್ದಾರೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಪರಿಹಾರ ಕೈಗೊಳ್ಳುವಂತೆ , ಮತ್ತು ಪರಿಹಾರ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಕ್ರಮ ತೆಗೆದುಕ್ಕೊಳ್ಳಬೇಕು Sri @CMofKarnataka Sri @mepratap
— Sadananda Gowda (@DVSBJP) August 16, 2018
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.