‘ನಿರಾಶ್ರಿತರಿಗೆ ಮನೆ ನಿರ್ಮಿಸುವ ಸ್ಥಳಗಳಲ್ಲೇ ತಾತ್ಕಾಲಿಕ ಶೆಡ್ ನಿರ್ಮಿಸಲಾಗುವುದು. ಹಿಂದಿನ ಸಂದರ್ಭಗಳಲ್ಲಿ ತೀರ ಚಿಕ್ಕದಾದ ಸ್ಥಳದಲ್ಲಿ ಮನೆಗಳನ್ನು ಕಟ್ಟಿಕೊಟ್ಟಿದ್ದು, ಇಂತಹ ಮನೆಗಳಿಗೆ ಜನರು ಹೋಗುತ್ತಿರಲಿಲ್ಲ. ಆದರೆ ಈ ಸಲ 30X30 ಅಥವಾ 30X40 ಅಳತೆಯ ನಿವೇಶನದಲ್ಲಿ ಮನೆ ನಿರ್ಮಿಸಲಾಗುವುದು. ನೆರೆಗೆ ತುತ್ತಾದ ಜನರು ಆಶ್ರಯ ಪಡೆದಿರುವ ಕೇಂದ್ರಗಳನ್ನು ‘ಕಾಳಜಿ ಕೇಂದ್ರ’ಗಳು ಎಂದೇ ಕರೆಯುವಂತೆ ಆದೇಶ ಹೊರಡಿಸಲಾಗುವುದು’ ಎಂದರು.