ವಿಶ್ವಾಸಮತ ಪ್ರಕ್ರಿಯೆ ನಡೆಸುವ ಕುರಿತು ಸ್ಪೀಕರ್ ಆಶಾಭಾವ ವ್ಯಕ್ತಪಡಿಸಿದ್ದರಿಂದ ಮಂಗಳವಾರ ಈ ಕುರಿತು ಯಾವುದೇ ಆದೇಶ ನೀಡದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತ್ತು. ಆದರೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಸಂಜೆ ವಿಶ್ವಾಸಮತ ಯಾಚಿಸಿದ್ದರಿಂದ ಅರ್ಜಿಯ ಉದ್ದೇಶ ಈಡೇರಿದಂತಾಗಿದೆ ಎಂದೇ ಭಾವಿಸಿ ಅರ್ಜಿದಾರರ ಪರ ವಕೀಲರು ಹಾಜರಾಗಲಿಲ್ಲ.ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಕೋರ್ಟ್ ಹಾಲ್ಗೆ ಬಂದರಾದರೂ ರೋಹಟ್ಗಿ ಅವರು ಇಲ್ಲದ್ದನ್ನು ಕಂಡು ವಾಪಸಾದರು. ಮುಖ್ಯಮಂತ್ರಿ ಪರ ವಕೀಲ ರಾಜೀವ್ ಧವನ್ ಹಾಜರಿದ್ದರು.