‘ನಮ್ಮ ಈ ಸ್ಥಿತಿಗೆ ಇವರೇ ಕಾರಣ. ಸಹಾಯಧನ ಕೊಡಿಸುವುದಾಗಿ ನಂಬಿಸಿ, ನಮ್ಮಿಂದ ದಾಖಲೆ ಪಡೆದಿದ್ದಾರೆ. ಪತಿ ಬದುಕಿದ್ದರೂ ಬೇರೊಬ್ಬರ ಮರಣ ಪ್ರಮಾಣಪತ್ರ ಪಡೆದು, ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮತ್ತೊಮ್ಮೆ ನಮ್ಮ ಮದುವೆ ನೋಂದಣಿ ಮಾಡಿಸಿದ್ದಾರೆ. ನಮ್ಮ ಖಾತೆಗೆ ಬಂದ ₹ 3 ಲಕ್ಷದಲ್ಲಿ, ₹ 2.50 ಲಕ್ಷ ಅವರೇ ಬಿಡಿಸಿಕೊಂಡಿದ್ದಾರೆ’ ಎಂದು ದೂರಿದರು.